ತುಮಕೂರು ಕೇಂದ್ರ ಕಾರಾಗೃಹ 
ರಾಜ್ಯ

ತುಮಕೂರು ಕೇಂದ್ರ ಕಾರಾಗೃಹವು ಮಹಿಳಾ ಖೈದಿಗಳಿಗೆ ವರಮಾನ ಕೇಂದ್ರ!

ಜಾಮೀನು ಪಡೆಯಲು ಹಣವಿಲ್ಲದೇ ಜೈಲು ಶಿಕ್ಷೆ ಅನುಭವಿಸುತ್ತಿರುವ ತುಮಕೂರು ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಖೈದಿಗಳು ಸದ್ಯ ತಮ್ಮ ಜೀವನ...

ತುಮಕೂರು: ಜಾಮೀನು ಪಡೆಯಲು ಹಣವಿಲ್ಲದೇ ಜೈಲು ಶಿಕ್ಷೆ ಅನುಭವಿಸುತ್ತಿರುವ ತುಮಕೂರು ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಖೈದಿಗಳು ಸದ್ಯ ತಮ್ಮ  ಜೀವನ ನಿರ್ವಹಣೆಗಾಗಿ ಅಗತ್ಯವಿರುವ ಹಣ ಸಂಪಾದಿಸುತ್ತಿದ್ದಾರೆ,

2013ರ ಏಪ್ರಿಲ್ 23 ರಂದು ತುಮಕೂರು ಮಹಿಳಾ ಕೇಂದ್ರ ಕಾರಾಗೃಹವನ್ನು ಆರಂಭಿಸಲಾಯಿತು. ಆದರೆ ನಿಧಾನವಾಗಿ ಈ ಕಾರಾಗೃಹ ಮನೆಯಿಂದ ದೂರವಿರುವ ಖೈದಿಗಳಿಗೆ ಮನೆಯ ವಾತಾವರಣದಂತಾಗಿದೆ.

ಹೊರಗೆ ನಿರ್ಜನವಾಗಿ, ಸದ್ದು ಗದ್ದಲವಿಲ್ಲದಂತೆ ಕಾಣುವ ಜೈಲಿನ ಒಳಗಿರುವ ಖೈದಿಗಳು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರಾಗಿರುತ್ತಾರೆ. ಗಂಧದಕಡ್ಡಿ ಪ್ಯಾಕಿಂಗ್, ಸಿಹಿತಿಂಡಿ ತಯಾರಿಕೆ ಸೇರಿದಂತೆ ವಿವಿಧ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಕೆಲ ಮಹಿಳೆಯರು ಜಾಮೀನಿಗಾಗಿ ಹಣ ಕೂಡಿಡುತ್ತಿದ್ದಾರೆ. ಹಲವರು ಭವಿಷ್ಯಕ್ಕಾಗಿ ತಮ್ಮ ಕೌಶಲ್ಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಇದು ಸಾಧ್ಯವಾಗಲು ಕಾರಣ ತುಮಕೂರು ಕೇಂದ್ರ ಮಹಿಳಾ ಕಾರಾಗೃಹದ ಡಿಜಿ ಮತ್ತು ಐಜಿಪಿ ಎಚ್.ಎನ್ ಸತ್ಯನಾರಾಣರಾವ್ ಮತ್ತು ಸಹಾಯದ ಜೈಲು ಅಧೀಕ್ಷಕಿ ಆರ್ ಲತಾ. ಈ ಇಬ್ಬರು ಅಧಿಕಾರಿಗಳು ಸ್ವಯಂ ಸೇವಾ ಸಂಘಗಳನ್ನು ಸಂಪರ್ಕಿಸಿ, ಮಹಿಳಾ ಕೈದಿಗಳಿಗೆ ಕೆಲಸ ಒದಗಿಸಿಕೊಡುವ ಮೂಲಕ ಅವರು ಬದಲಾಗಲು ಕಾರಣಕರ್ತರಾಗಿದ್ದಾರೆ.

ಜೈಲಿನಿಂದ ಹೊರಗೆ ಹೋದ ನಂತರ ಅವರು ಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ನಿರ್ಹಹಿಸಲು, ಅನುಕೂಲವಾಗಲಿದೆ, ಜೈಲಿನಲ್ಲಿ ಮಹಿಳಾ ಕೈದಿಗಳು ಕ್ವಿಲ್ ಗರಿಯ ಆಭರಣ, ಪರಿಸರ ಸ್ನೇಹಿ ಬ್ಯಾಗ್ ಹೊಲಿಯುವುದು, ಸೋಲಾರ್ನಿಂದ ಹೊಲಿಗೆ ಯಂತ್ರ ಬಳಸಿ ಬಾಕ್ಸ್ ಗಳ ತಯಾರಿಕೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ನಿರತರಾಗಿರುತ್ತಾರೆ.

2016 ರ ನವೆಂಬರ್ ನಲ್ಲಿ ಜೈಲು ಪ್ರಾಧಿಕಾರ ಮತ್ತು ಪ್ರಸಿದ್ಧ ಅಗರ ಬತ್ತಿ ಸಂಸ್ಥೆಯ ನಡುವೆ ಒಪ್ಪಂದ ನಡೆದಿದ್ದು, ಅದರಂತೆ ತುಮಕೂರು ಜೈಲಿನ ಮಹಿಳಾ ಖೈದಿಗಳಿಗೆ ಅಗರಬತ್ತಿ ಪ್ಯಾಕಿಂಗ್ ಕೆಲಸ ನೀಡಲಾಗಿದೆ. 50 ಡಜನ್ ಅಗರಬತ್ತಿ ಪ್ಯಾಕ್ ಮಾಡಿದರೇ, 55 ರು ಹಣ ನೀಡಲಾಗುತ್ತದೆ.

ನಾವು ಪರಿವರ್ತನೆಗೊಳ್ಳಲು ದೇವರು  ನಮಗೆ ಈ ರೀತಿಯ ಅವಕಾಶ ನೀಡಿರುವುದು ಸಂತಸ ತಂದಿದೆ. ಜೈಲಿನಂದ ಹೊರಹೋದ ಮೇಲೆ ನಾವು ನಮ್ಮ ಕಾಲ ಮೇಲೆ ನಾವು ನಿಂತು ಜೀವನ ಮಾಡುತ್ತೇವೆ ಎಂದು ಮಹಿಳಾ ಖೈದಿಗಳು ಹೇಳಿದ್ದಾರೆ.

ಕೇವಲ ಉದ್ಯೋಗ ಮಾತ್ರವಲ್ಲದೇ ಜೈಲಿನ ಅಧಿಕಾರಿಗಳು ಖೈದಿಗಳಿಗೆ ವಿಧ್ಯಾಭ್ಯಾಸದ ಅವಕಾಶ ಕೂಡ ಕಲ್ಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT