ಸದಿ ಮೌಲಾನಾ ಶಬ್ಬೀರ್ ಗಂಗೊಳ್ಳಿ
ಕಾರವಾರ: ನಾನು ಭಾರತೀಯ ಪ್ರಜೆಯಾಗಿದ್ದು, ಭಾರತೀಯ ನ್ಯಾಯಾಂಗ ಮೇಲೆ ನನಗೆ ನಂಬಿಕೆಯಿದೆ. ಕೊನೆಗೂ ನಕಲಿ ಉಗ್ರರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ನನಗೆ ನ್ಯಾಯ ದೊರಕಿದ್ದು, ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಹೆಮ್ಮೆಯಿದೆ ಎಂದು ಸದಿ ಮೌಲಾನಾ ಶಬ್ಬೀರ್ ಗಂಗೊಳ್ಳಿ ಹೇಳಿದ್ದಾನೆ.
ಭಟ್ಕಳದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಬ್ಬೀರ್, 9 ವರ್ಷಗಳ ಕಾಲ ನಾನು ಜೈಲು ವಾಸ ಅನುಭವಿಸಿದ್ದೆ. ಪೊಲೀಸರು ನನಗೆ ಕಿರುಕುಳ ನೀಡಿದ್ದರು. 9 ವರ್ಷಗಳ ಕಾಲ ನನಗೆ ನರಕಲ ದರ್ಶನವಾಗಿತ್ತು. ನಾನು ಯಾವುದೇ ಅಪರಾಧವನ್ನು ಮಾಡಿಲ್ಲ. ಆದರೂ ಪೊಲೀಸಲು ಇಲ್ಲಸಲ್ಲದ ಆರೋಪಗಳ ಮೇಲೆ ನನ್ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಕೊನೆಗೂ ನ್ಯಾಯಾಲಯ ನನ್ನನ್ನು ಖುಲಾಸೆಗೊಳಿಸಿ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಹೇಳಿದ್ದಾನೆ.
ಮಾಡದ ತಪ್ಪಿಗೆ ನನ್ನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಮೌಲ್ವಿಯಾಗಿ ನಾನು ಪುಣೆಗೆ ಹೋಗಿದ್ದೆ. ಮಸೀದಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಡಿಸೆಂಬರ್ 30 ರಂದು ಪೊಲೀಸರು ಪುಣೆಯ ಮಸೀದಿ ಸುತ್ತಲೂ ಸುತ್ತವರೆದರು. ಒಂದು ಮಾತನ್ನೂ ಹೇಳದೆ, ಕೇಳದೆ ನನ್ನನ್ನು ಬಂಧನಕ್ಕೊಳಪಡಿಸಿದ್ದರು. ಯಾವುದೇ ಆಧಾರ, ಸಾಕ್ಷ್ಯಾಧಾರಗಳು ಇಲ್ಲದೆಯೇ 26/11 ಮುಂಬೈ ದಾಳಿ ಪ್ರಕರಣದಲ್ಲಿ ನಾನು ಉಗ್ರರಿಗೆ ಸಹಾಯ ಮಾಡಿದ್ದೇನೆಂಬ ಆರೋಪಗಳನ್ನು ಹೊರಿಸಲಾಗಿತ್ತು.
ನಕಲಿ ನೋಟು ಪ್ರಕರಣದಲ್ಲೂ ನನ್ನ ವಿರುದ್ಧ ಪ್ರಕರಣ ದಾಖಲಿಸಿದರು. ಜೈಲಿಗೆ ಕಳುಹಿಸಿದರು. ನಾನು ಮುಗ್ಧರಾಗಿದ್ದು, ನಾನು ಯಾವುದೇ ಅಪರಾಧವನ್ನೂ ಮಾಡಿರಲಿಲ್ಲ. ನನ್ನಂತೆಯೇ ಹಲವಾರು ಮುಸ್ಲಿಂ ಯುವಕರು ನಕಲಿ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಒಂದಲ್ಲ ಒಂದು ದಿನ ಅವರೂ ಕೂಡ ನನ್ನಂತೆಯೇ ನ್ಯಾಯವನ್ನು ಪಡೆಯುತ್ತಾರೆಂತು ತಿಳಿಸಿದ್ದಾನೆ.
ಭಟ್ಕಳದ ಕರಾವಳಿ ಪ್ರದೇಶದ ನಿವಾಸಿಯಾಗಿದ್ದ ಮೌಲಾನಾ ಶಬ್ಬೀರ್ ಗಂಗೊಳ್ಳಿ ಅಲಿಯಾಸ್ ಶಬ್ಬೀರ್ ಭಟ್ಕಳ್ ಅಲಿಯಾಸ್ ಹುಸೇನ್ ಶಬ್ಬೀರ್ ಮೆಹೆರುದ್ದೀನ್ ಗಂಗೊಳ್ಳಿಯವರನ್ನು ನಕಲಿ ನೋಟು ಹಾಗೂ ಉಗ್ರರಿಗೆ ಸಹಾಯ ಮಾಡುತ್ತಿದ್ದ ಎಂಬ ಆರೋಪದ ಮೇಲೆ 2008ರ ಡಿಸೆಂಬರ್ 30ರಂದು ಪುಣೆ ಉಗ್ರನಿಗ್ರಹ ಪಡೆ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಪ್ರಕರಣ ಸಂಬಂಧ ಸುಧೀರ್ಘ ವಿಚಾರಣೆ ಬಳಿಕ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಬ್ಬೀರ್ ನನ್ನು ಪ್ರಕರಣಗಳಿಂದ ಖುಲಾಸೆಗೊಳಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos