ಬೆಳಗಾವಿ: ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವವರು ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉಡುಪಿ ಎಸಿ ಮೇಲೆ ಮರಳು ಮಾಫಿಯಾ ದಾಳಿ ನಡೆಸಿದ ಬೆನ್ನಲ್ಲೇ ಚಿಕ್ಕೋಡಿಯ ತಹಶಿಲ್ದಾರ್ ಮೇಲೆ ಮರಳು ಮಾಫಿಯಾದವರು ದಾಳಿ ನಡೆಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಎಕ್ಸಾಂಬಾದಲ್ಲಿ ಈ ಘಟನೆ ನಡೆದಿದೆ. ಮರಳು ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ತಹಶಿಲ್ದಾರ್ ಇಬ್ಬರು ಸಹಾಯಕ ಅಧಿಕಾರಿಗಳೊಂದಿಗೆ ದೂದ್ ಗಂಗಾ ನದಿ ಪ್ರದೇಶದಲ್ಲಿರುವ ಮರಳು ಗಣಿಗಾರಿಕೆ ನಡೆಸಲಾಗುತ್ತಿರುವ ಪ್ರದೇಶದ ಮೇಲೆ ದಾಳಿ ನಡೆಸಿದ್ದರು.
ಮರಳು ತುಂಬಿದ್ದ ದೋಣಿಗಳನ್ನು ವಶಪಡಿಸಿಕೊಳ್ಳಲು ಹೋದ ತಹಶಿಲ್ದಾರ್ ಸಿಎಸ್ ಕುಲಕರ್ಣಿ ಅವರ ತಂಡದ ಮೇಲೆ ಮರಳು ಮಾಫಿಯಾದವರು ದಾಳಿ ನಡೆಸಿದ್ದು ಕಲ್ಲು ತೂರಾಟ ನಡೆಸಿದ್ದಾರೆ. ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆದರೂ ಸಹ ಅಧಿಕಾರಿಗಳ ತಂಡ ಮರಳು ತುಂಬಿದ್ದ ದೋಣಿಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸುವುದಾಗಿ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos