ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಾಳೆ ಅಂದರೆ ಏಪ್ರಿಲ್ 17 ರಂದು ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ನಗರದ ಹಲವೆಡೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
ಸುಬ್ರಮಣ್ಯಪುರ, ಸಾರಕ್ಕಿ, ಅರೇಹಳ್ಳಿ, ಇಸ್ಕಾನ್, ಜಯದೇವ, ಇಸ್ರೋ ಉಪ ವಿದ್ಯುತ್ ಸ್ಟೇಷನ್ ಗಳಲ್ಲಿ ನಿರ್ವಹಣಾ ಕಾರ್ಯ ಇರುವುದರಿಂದ ವಿದ್ಯುತ್ ಕಡಿತಗೊಳ್ಳಲಿದೆ.
ಅರೇಹಳ್ಳಿ ವ್ಯಾಪ್ತಿಯ ಭುವನೇಶ್ವರಿ ನಗರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿಸ ಇಟ್ಟಮಡು, ಹೊಸಕೆರೆ ಹಳ್ಳಿ, ಮಂಜುನಾಥ ನಗರ, ಬಿಎಸ್ ಕೆ 5ನೇ ಹಂತ, ಉತ್ತರ ಹಳ್ಳಿ, ಶ್ರೀನಿವಾಸ ಕಾಲೋನಿ, ತುರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ,
ಸುಬ್ರಮಣ್ಯಪುರ ವ್ಯಾಪ್ತಿಯ ವಸಂತ ಪುರ, ಮಾರುತಿ ಲೇಔಟ್ ಕಲ್ಯಾಣಿನಗರ, ಸತ್ಯಮ್ಮನ ಕುಂಟೆ, ದೇಸಾಯಿ ಗಾರ್ಡನ್, ಕನಕಪುರ ರಸ್ತೆ, ಸುಬ್ರಮಣ್ಯಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
ಇಸ್ಕಾನ್ ಸುತ್ತಮುತ್ತಲಿನ ರಘುವನಹಳ್ಳಿ, ದೊಡ್ಡಕಲ್ಲಸಂದ್ರ, ಜಯನಗರ 7 ಮತ್ತು8 ನೇ ಬ್ಲಾಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ,
ಜಯದೇವ ವ್ಯಾಪ್ತಿಯ 4ನೇ ಟಿ ಬ್ಲಾಕ್, ಎಸ್ ಆರ್ ಕೆ ಗಾರ್ಡನ್, ತಿಲಕ್ ನಗರ, ಸಾರಕರ್ರಿ ಜರಗನಹಳ್ಳಿ, 24 ಮೈನ್, ಜೆ.ಪಿ ನಗರ, ಜಯನಗರ 3ನೇ ಹಂತ, ವಿನಾಯಕನಗರ, ಜೆ.ಪಿನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ,
ಇಸ್ರೋ, ಜೆ.ಸಿ ಲೇಔಟ್, ಯಲಚೇನಹಳ್ಳಿ, ಕುಮಾರಸ್ವಾಮಿ ಲೇಔಟ್, ನಂಜಪ್ಪ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಪೂರೈಕೆ ಇರುವುದಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos