ಅದ್ವೈತ-ಅನುಸಂಧಾನಂ 
ರಾಜ್ಯ

ಶಂಕರ ಜಯಂತಿ ಪ್ರಯುಕ್ತ ಮೇ.1 ಕ್ಕೆ ಅದ್ವೈತ-ಅನುಸಂಧಾನಂ ಕನ್ನಡ ನಾಟಕ

ಏ.30 ರಂದು ಆದಿ ಶಂಕರಾಚಾರ್ಯರ ಜಯಂತಿ. ಶಂಕರ ಜಯಂತಿ ಅಂಗವಾಗಿ ಮೇ.1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರವೀಂದ್ರ ಪುಸ್ತಕಾಲಯದ ಸಹಯೋಗದಲ್ಲಿ ಅದ್ವೈತ-ಅನುಸಂಧಾನಂ ಕನ್ನಡ ನಾಟಕ ನಡೆಯಲಿದೆ.

ಬೆಂಗಳೂರು: ಏ.30 ರಂದು ಆದಿ ಶಂಕರಾಚಾರ್ಯರ ಜಯಂತಿ. ಶಂಕರ ಜಯಂತಿ ಅಂಗವಾಗಿ ಮೇ.1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರವೀಂದ್ರ ಪುಸ್ತಕಾಲಯದ ಸಹಯೋಗದಲ್ಲಿ ಅದ್ವೈತ-ಅನುಸಂಧಾನಂ ಕನ್ನಡ ನಾಟಕ ನಡೆಯಲಿದೆ. 
ಹಿರಿಯ ಪತ್ರಕರ್ತರಾದ ಎಸ್ಎಲ್ಎನ್ ಸ್ವಾಮಿ ಅವರು ಅದ್ವೈತ ಅನುಸಂಧಾನಂ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದು, ನಾಟಕಕ್ಕೆ  ಕನ್ನಡಪ್ರಭ.ಕಾಂ ನ "ರಾಮಾಯಣ ಅವಲೋಕನ" ಅಂಕಣಕಾರರಾದ ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್ ಅವರ ತಾತ್ವಿಕ ಮಾರ್ಗದರ್ಶನವಿದೆ.
ವಿಶ್ವ ರಂಗಭೂಮಿಯಲ್ಲಿ ಶಂಕರ ಭಗವತ್ಪಾದರನ್ನು ಕುರಿತ ಪ್ರಪ್ರಥಮ ಪರಿಪೂರ್ಣ ದೃಶ್ಯರೂಪಕ ಅದ್ವೈತ-ಅನುಸಂಧಾನಂ ಆಗಿದೆ. ಮಧ್ಯಾಹ್ನ 12:30ಕ್ಕೆ ಕೃತಿ ಬಿಡುಗಡೆ ಹಾಗೂ ಮಹಾ-ಅದ್ವೈತಿ ಬಿರುದು ಪ್ರದಾನವೂ ನಡೆಯಲಿದೆ. 
ಕರ್ನಾಟಕ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನ್ಯಾ.ಎನ್.ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಡಾ.ಪಾವಗಡ ಪ್ರಕಾಶ್ ರಾವ್, ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ.ವಿ.ಆರ್ ಗೌರಿಶಂಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ.ಎನ್ ವೆಂಕಟನಾರಾಯಣ್, ವಿದ್ವಾನ್ ಡಾ.ಕೆ.ಜಿ ಸುಬ್ರಾಯ ಶರ್ಮ, ಡಾ.ಭಾನುಪ್ರಕಾಶ್ ಶರ್ಮ, ದೈವಜ್ಞ ಕೆ.ಎನ್ ಸೋಮಯಾಜಿ, ವಿದ್ವಾನ್ ಗಣೇಶ್ ಘನಪಾಠಿ, ಶ್ರೀ ಶಂಕರ ವಾಹಿನಿಯ ಸಿಇಒ ಕೆಎಸ್  ಸುರೇಶ್ ಕುಮಾರ್, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ್, ಲಹರಿ ರೆಕಾರ್ಡಿಂಗ್ ಸಂಸ್ಥೆ ಎಂಡಿ ಲಹರಿವೇಲು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?