ಎಚ್.ವೈ ಮೇಟಿ 
ರಾಜ್ಯ

ನನ್ನನ್ನು ಅಪಹರಿಸಲಾಗಿತ್ತು: ಎಚ್.ವೈ ಮೇಟಿ ಸಿಡಿ ಹಗರಣದ ಸಂತ್ರಸ್ತೆಯಿಂದ ದೂರು

ಮಾಜಿ ಸಚಿವ ಎಚ್.ವೈ ಮೇಟಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಡಿ ಬಿಡುಗಡೆಯಾದ ಮೇಲೆ ಮೇಟಿ ರಾಜಿನಾಮೆ ನೀಡಿ, ತನಿಖೆ ಪೂರ್ಣಗೊಂಡು ಸಿಐಡಿ ...

ಬೆಂಗಳೂರು: ಮಾಜಿ ಸಚಿವ ಎಚ್.ವೈ ಮೇಟಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಡಿ ಬಿಡುಗಡೆಯಾದ ಮೇಲೆ ಮೇಟಿ ರಾಜಿನಾಮೆ ನೀಡಿ, ತನಿಖೆ ಪೂರ್ಣಗೊಂಡು ಸಿಐಡಿ ಕ್ಲೀನ್ ಚಿಟ್ ನೀಡುವವರೆಗೂ ನನ್ನನ್ನು ಅಪಹರಿಸಿ ಇಡಲಾಗಿತ್ತು ಎಂದು ಸಂತ್ರಸ್ತ ಮಹಿಳೆ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ನನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ, ಆದರೆ ಜೀವ ಬೆದರಿಕೆಯಿದ್ದ ಕಾರಣ ನಾನು ದೂರು ನೀಡಿರಲಿಲ್ಲ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿದ ಮೇಲೆ ಜನವರಿ 30 ರಂದು ವಿತಾರಣೆಗೆ ಹಾಜರಾಗುವಂತೆ ನನಗೆ ಸಮನ್ಸ್ ನೀಡಲಾಗಿತ್ತು,  ಅದರ ಹಿಂದಿನ ರಾತ್ರಿ ಅಂದರೆ ಜನವರಿ 29ರಂದು ಮೇಟಿ ಅವರ ಕೆಲವು ಬೆಂಬಲಿಗರು ನನ್ನ ಬಳಿ ಬಂದು ಸಿಐಡಿ ಅಧಿಕಾರಿಗಳು ತಯಾರಿಸಿದ್ದ ಪ್ರಶ್ನಾವಳಿಗಳಿಗೆ ನನ್ನಿಂದ ಉತ್ತರ ಬರೆಸಿಕೊಂಡರು. ಮಾರನೇ ದಿನ ನಾನು ಸಿಐಡಿ ಕಚೇರಿಗೆ ಹಾಜರಾದಾಗ ಅಧಿಕಾರಿಗಳು ಲೈಂಗಿಕ ಕಿರುಕುಳದ ಬಗ್ಗೆ ಹಾಗೂ ಮೇಟಿಯ ಬಗ್ಗೆ ಯಾವುದೇ ಪ್ರಶ್ನೆ ಕೇಳದೇ ವಾಪಸ್ ಕಳುಹಿಸಿದರು. ನಂತರ ಕೆಲವು ದಿನಗಳ ಮೇಲೆ ಮೇಟಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು ಎಂದು ಆಕೆ ಹೇಳಿದ್ದಾರೆ.
2016ರ ಡಿಸೆಂಬರ್ ನಲ್ಲಿ ಪ್ರಕರಣ ಬೆಳಕಿಗೆ ಬಂದ ಮೇಲೆ ನನ್ನನ್ನು ಅಪಹರಿಸಲಾಗಿತ್ತು, ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿತ್ತು. ಜೂನ್ ನಲ್ಲಿ ನನ್ನನ್ನು ರಿಲೀಸ್ ಮಾಡಲಾಯಿತು, ಇನ್ನೂ ನನಗೆ ಜೀವ ಬೆದರಿಕೆಯಿದೆ ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT