ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸೈಯ್ಯದ್ ಅಬ್ಬಾಸ್ ಮತ್ತು ಅವರ ಪುತ್ರ 
ರಾಜ್ಯ

ಮೈಸೂರು: 25 ವರ್ಷದ ನಂತರ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಅಪ್ಪ-ಮಗ

ಮೈಸೂರು: ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮೈಸೂರು ಮೂಲದ ತಂದೆ-ಮಗ 25 ವರ್ಷಗಳ ನಂತರ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಸಯ್ಯದ್ ಅಬ್ಬಾಸ್ (46) ಹಾಗೂ ಅವರ ಪುತ್ರ ಸೈಯ್ಯದ್ ಹತೀಕ್ (20) ಮಂಗಳವಾರ ಇಲ್ಲಿನ ಆರ್ಯ ಭವನದಲ್ಲಿ ಸಂಪ್ರದಾಯದ ಪ್ರಕಾರ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡರು.
ಮಂಡ್ಯ ಮೂಲದವರಾದ ಗೋವಿಂದರಾಜು ಅವರ ಪುತ್ರ ಶೇಷಾದ್ರಿ 25 ವರ್ಷಗಳ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸೈಯ್ಯದ್ ಅಬ್ಬಾಸ್ ಎಂದು ಹೆಸರು ಬದಲಿಸಿಕೊಂಡಿದ್ದರು. ನಂತರ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು, ಇದರಿಂದಾಗಿ ಅವರು ತಮ್ಮ ಸಂಬಂಧಿಕರಿಂದ ದೂರಾಗಿದ್ದರು.
ನಂತರ ನಡೆದ ಹಲವು ಘಟನೆಗಳಿಂದ ಅಸಮಾಧಾನ ಗೊಂಡ ಸೈಯ್ಯದ್ ಅಬ್ಬಾಸ್ ಹಿಂದೂ ಧರ್ಮಕ್ಕೆ ಮರಳಲು ಜನವರಿ 2017 ರಲ್ಲಿ ಶ್ರೀರಾಮ ಸೇನೆ ನೆರವು ಕೋರಿದ್ದರು. 
ಅವರ ಮನವಿಗೆ ಸ್ಪಂದಿಸಿದ ಶ್ರೀರಾಮ ಸೇನೆ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ಹಿಂದೂ ಧರ್ಮಕ್ಕೆ ಮರಳಿದರು. ಈ ವೇಳೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸಹ ಹಾಜರಿದ್ದರು.
ಮತಾಂತರಗೊಂಡ ನಂತರ ಸೈಯ್ಯದ್ ಅಬ್ಬಾಸ್ ಅವರು ಶೇಷಾದ್ರಿಯಾಗಿ ಹಾಗೂ ಪುತ್ರ ಸೈಯ್ಯದ್ ಹತೀಕ್ ಅವರು ಹರ್ಷಿಲ್ ಆರ್ಯ ಎಂದು ಹೆಸರು ಬದಲಿಸಿಕೊಂಡಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT