ರಾಜ್ಯ

ಕೆಪಿಸಿಸಿ ಕಾರ್ಯದರ್ಶಿ ಮುಳಗುಂದ್ ನಿವಾಸದ ಮೇಲೆ ಐಟಿ ರೈಡ್

Raghavendra Adiga
ಬೆಂಗಳೂರು: ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಐಟಿ ದಾಳಿ ಮುಂದುವರಿದಿದ್ದು ಇಂಧನ ಸಚಿವ ಡಿಕೆಶಿ ಆಪ್ತ, ಕೆಪಿಸಿಸಿ ಕಾರ್ಯದರ್ಶಿ ವಿಜಯ್ ಮುಳಗುಂದ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.
ಈ ಬೆಳವಣಿಗೆ ಕೈ ಪಾಳೆಯವನ್ನು ಆತಂಕಕ್ಕೆ ದೂಡಿದ್ದು ಇತ್ತೀಚೆಗೆ ನಡೆದ  ಗುಜರಾತ್ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದ ಗುಜರಾತ್ ಕಾಂಗ್ರೆಸ್‌ ನ ಶಾಸಕರ ಆತಿಥ್ಯವನ್ನು ಡಿಕೆಶಿ ಮತ್ತು ವಿಜಯ್ ಮುಳಗುಂದ್ ವಹಿಸಿಕೊಂಡಿದ್ದರು.
ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷರಾಗಿದ್ದ ಮುಖಗುಂದ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಇಂದು ಬೆಳಗ್ಗೆ ದಾಳಿ ಪ್ರಾರಂಭವಾಗಿದೆ.
SCROLL FOR NEXT