ಸಲಿಂಗಕಾಮಕ್ಕೆ ನಿರಾಕರಣೆ, ವ್ಯಕ್ತಿಯ ಭೀಕರ ಹತ್ಯೆ 
ರಾಜ್ಯ

ಬೆಂಗಳೂರು: ಸಲಿಂಗಕಾಮಕ್ಕೆ ನಿರಾಕರಣೆ, ವ್ಯಕ್ತಿಯ ಭೀಕರ ಹತ್ಯೆ

ತನ್ನ ಸಹೋದ್ಯೋಗಿಯನ್ನು ಕೊಂದ ಆರೋಪದ ಮೇಲೆ ಪೋಲೀಸರು ಹೋಟೆಲ್ ಕೆಲಸಗಾರನೊಬ್ಬನನ್ನು ಬಂಧಿಸಿದ್ದಾರೆ.

ಬೆಂಗಳೂರು: ತನ್ನ ಸಹೋದ್ಯೋಗಿಯನ್ನು ಕೊಂದ ಆರೋಪದ ಮೇಲೆ ಪೋಲೀಸರು ಹೋಟೆಲ್ ಕೆಲಸಗಾರನೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತನನ್ನು ದೇವರಾಜ್ ಎಂದು ಗುರುತಿಸಲಾಗಿದ್ದು ಈತ ಬೆಂಗಳೂರಿನ ಮಡಿವಾಳದಲ್ಲಿರುವ ಆರೋಗ್ಯ ರೆಸ್ಟೋರೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈತನ ಸಹೋದ್ಯೋಗಿಯಾಗಿದ್ದ ಬೆನ್ನೆಗೌಡನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಇದೀಗ ಅವನ ಬಂಧನವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಮೃತ ಚೆನ್ನೇಗೌಡ ಹಾಗೂ ಆರೋಪಿ ದೇವರಾಜ್ ಇಬ್ಬರೂ ಸಲಿಂಗಕಾಮಿಗಳಾಗಿದ್ದು  ಕಳೆದ ನಾಲ್ಕು ತಿಂಗಳಿನಿಂದಲೂ ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಬಂಧವಿರಿಸಿಕೊಂಡಿದ್ದರು. ಡಿ.21ರಂದು ಸಹ ದೇವರಾಜ್, ತನ್ನ ಸಹೋದ್ಯೋಗಿಯನ್ನು ಸಲಿಂಗ ಕಾಮಕ್ಕಾಗಿ ಸ್ಮಶಾನಕ್ಕೆಕರೆಸಿಕೊಂಡಿದ್ದನು. ಆದರೆ ಸ್ಮಶಾನಕ್ಕೆ ಆಗಮುಇಸಿದ ಬೆನ್ನೆಗೌಡ ಕಾಮಕೇಳಿಗೆ ನಿರಾಕರಿಸಿದ್ದಾನೆ. ಇದರಿಂದ ಕುಪಿತನಾದ ಆರೋಪಿ ಬಿಯರ್ ಬಾಟಲ್ ನಿಂದ ಹೊಡೆದು, ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಗುರುತು ಪತ್ತೆಯಾಗದಂತೆ ಹತ್ಯೆ ಮಾಡಿದ್ದನು.
ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದಾಗ ಘಟನಾ ಸ್ಥಳದಲ್ಲಿ ದೊರೆತ ಬ್ಯಾಂಕ್ ಸ್ಲಿಪ್ ಹಾಗೂ ಬಿಯರ್ ಬಾಟಲಿಗಳಿಂದ ಆರೋಪಿಯ ಸುಳಿವು ಪತ್ತೆಯಾಗಿದೆ. ಸದ್ಯ ಆರೋಪಿ ದೇವರಾಜ್ ಮಡಿವಾಳ ಪೋಲೀಸರ ವಶದಲ್ಲಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT