ಫೇಸ್ ಬುಕ್ ಸ್ನೇಹಿತೆಯಿಂದ ಮೋಸ, 1.5 ಲಕ್ಷ ರೂ. ವಂಚನೆ 
ರಾಜ್ಯ

ಬೆಂಗಳೂರು: ಫೇಸ್ ಬುಕ್ ಸ್ನೇಹಿತೆಯಿಂದ ಮೋಸ, 1.5 ಲಕ್ಷ ರೂ. ವಂಚನೆ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು ವಂಚಿಸಿ ಹಣ ದೋಚುವ ಪ್ರಕರಣಗಳು ಹೆಚ್ಚುತ್ತಿವೆ.

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು  ವಂಚಿಸಿ ಹಣ ದೋಚುವ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿಯೂ ಆನ್ ಲೈನ್ ನಲ್ಲಿ ಪರಿಚಯವಾದ ಯುವತಿಯರಿಂದ ವಂಚನೆಗೊಳಗಾಗುವ ಯುವಕರ ಸಂಖ್ಯೆ ಸಾಕಷ್ಟಿದೆ. ಇದೂ ಸಹ ಅಂತಹಾ ಪ್ರಕರಣಗಳಲ್ಲಿ ಒಂದು. 
ಬೆಂಗಳೂರಿನ ಆನಂದ್ ರಾವ್ ಎನ್ನುವಾತ ಆನ್ ಲೈನ್ ನಲ್ಲಿ ಪರಿಚಯವಾದ ಯುವತಿಯೊಬ್ಬಳಿಂದ ವಂಚನೆಗೀಡಾಗಿದ್ದಾರೆ. ಫೆಸ್ ಬುಕ್ ನಲ್ಲಿ ಪರಿಚಯವಾದ ಯುವತಿ ಆನಂದ್ ಅವರಿಂದ 1.5 ಲಕ್ಷ ರೂ. ಪಡೆದು ಯಾಮಾರಿಸಿದ್ದಾಳೆ. 
ಘಟನೆ ವಿವರ: ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ಆನಂದ್ ರಾವ್ ಜತೆ ಚಾಟ್ ಮಾಡುತ್ತಿದ್ದಳು. ಇಬ್ಬರ ನಡುವೆ ಸ್ನೇಹ ಪ್ರಾರಂಭವಾಗಿತ್ತು. ತಾನು ಇಂಗ್ಲೆಂಡಿನಲ್ಲಿರುವುದಾಗಿ ಹೇಳಿಕೊಂಡ ಯುವತಿ ಜತೆ ಕೆಲ ದಿನಗಳ ಕಾಲ ವಾಟ್ಸ್ ಅಪ್ ಹಾಗೂ ಫೇಸ್ ಬುಕ್ ನಲ್ಲಿ ಆನಂದ್ ಚಾಟ್ ಮಾಡುತ್ತಿದ್ದರು. 
ಅದೊಮ್ಮೆ ಯುವತಿ ತಾನು ಆನಂದ್ ಅವರನ್ನು ಕಾಣಲು ಬೆಂಗಳೂರಿಗೆ ಬರಲಿದ್ದೇನೆ ಎಂದು ಸಂದೇಶ ಕಳಿಸಿದ್ದಾರೆ. ಅದಾಗಿ ಕೆಲ ಸಮಯದ ನಂತರ 'ತಾನು ದೆಹಲಿ ತಲುಪಿದ್ದೇನೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ಹಿಡಿದಿದ್ದಾರೆ' ಎಂದು ಮತ್ತೆ ಸಂದೇಶ ಕಳಿಸಿದ್ದು ಆನಂದ್ ಗೆ ಒಂದೂ ವರೆ ಲಕ್ಷ ಬೇಡಿಕೆ ಇಟ್ಟಿದ್ದಾಲೆ. 'ಅಧಿಕಾರಿಗಳು ಒಂದೂವರೆ ಲಕ್ಷ ರೂ ಹಣ ಕೇಳುತ್ತಿದ್ದಾರೆ. ನೀವು ಹಣ ಕಳಿಸಿಕೊಡಿ, ನಾನು ಬೆಂಗಳೂರಿಗೆ ಬಂದೊಡನೆ ನಿಮ್ಮ ಹಣ ಮರಳಿಸುತ್ತೇನೆ' ಎಂದಿದ್ದಾಳೆ.
ಗೆಳತಿ ತೊಂದರೆಯಲ್ಲಿದ್ದಾಳೆ ಎಂದು ನಂಬಿದ ಆನಂದ್ ಯುವತಿ ಖಾತೆಗೆ ಹಣ ವರ್ಗಾಯಿಸಿದ್ದಾರೆ.ಆದರೆ ಹಣ ಕೈಗೆ ಸಿಕ್ಕೊಡನೆ ಯುವತಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅವಳ ವಾಟ್ಸ್ ಅಪ್ ಹಾಗೂ ಫೇಸ್ ಬುಕ್ ಖಾತೆಗಳೂ ಡಿಲೀಟ್ ಆಗಿದೆ. ಆನಂದ್ ಗೆ ತಾನು ಮೋಸ ಹೋಗಿರುವುದರ ಅರಿವಾಗಿದೆ. ಇದೀಗ ಆನಂದ್  ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪೋಲೀಸರು ಯುವತಿಯ ಶೋಧಕ್ಕೆ ತೊಡಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

SCROLL FOR NEXT