ತಾವು ಅಭಿವೃದ್ಧಿಪಡಿಸಿದ ಸಾಧನ, ಬಲಚಿತ್ರದಲ್ಲಿ ಸಾಯಿ ರಾಹುಲ್ ಮತ್ತು ಗಿರೀಶ್ 
ರಾಜ್ಯ

ಮಾಲಿನ್ಯಕಾರ ಅಂಶಗಳನ್ನು ಪತ್ತೆಹಚ್ಚುವ ಸಾಧನ ಆವಿಷ್ಕರಿಸಿದ ರಾಯಚೂರಿನ ಬಾಲಕರು

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕೃಷಿ ಕುಟುಂಬದಿಂದ ಬಂದ ಹುಡುಗ ಸಾಯಿ...

ಬೆಂಗಳೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕೃಷಿ ಕುಟುಂಬದಿಂದ ಬಂದ ಹುಡುಗ ಸಾಯಿ ರಾಹುಲ್. ಇಲ್ಲಿನ ಡೆಫೊಡಿಲ್ಸ್ ಕಾನ್ಸೆಪ್ಟ್ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ರಾಹುಲ್ ಗೆ ನೆನಪಿದ್ದಾಗಿನಿಂದ ಅವನ ತಂದೆ, ತಾತ ಭೂಮಿ ಉಳುವ ಕೆಲಸ ಮಾಡಿಕೊಂಡಿರುವವರು. 
ರಾಯಚೂರು ಎಂದಾಕ್ಷಣ ನೆನಪಿಗೆ ಬರುವುದು ಬಿಸಿಲು ಹೆಚ್ಚು, ನೀರಿಗೆ ಕೊರತೆ. ಇಲ್ಲಿ ಅನೇಕ ಕೊಳಗಳಿವೆ, ಇಲ್ಲಿನ ರೈತರು ಪರ್ಯಾಯ ಆದಾಯವಾಗಿ ಮೀನು ಮತ್ತು ಸಿಗಡಿಗಳನ್ನು ಸಾಕುತ್ತಾರೆ. ಆದರೆ ಈ ಮೀನು, ಸಿಗಡಿಗಳ ಮೇಲೆ ರೈತರು ಬೆಳೆಗಳಿಗೆ ಸಿಂಪಡಣೆ ಮಾಡುವ ರಾಸಾಯನಿಕಗಳು ಮಳೆ ಬಂದಾಗ ತೊಳೆದು ಹೋಗಿ ಕೊಳಗಳನ್ನು ಸೇರುತ್ತವೆ. ಅಲ್ಲದೆ ಸಾಕಷ್ಟು ರಾಸಾಯನಿಕಗಳು ಅಂತರ್ಜಲವನ್ನು ಸೇರುತ್ತವೆ. 
ಫಾಸ್ಫೇಟ್ ರಾಸಾಯನಿಕಗಳಲ್ಲಿ ಹೆಚ್ಚು ಸೇರ್ಪಡೆಯಾದಾಗ ಜೀರ್ಣಕ್ರಿಯೆ ತೊಂದರೆಗಳು ಬರುತ್ತವೆ. ಅಲ್ಲದೆ ಮನುಷ್ಯರು ವಯಸ್ಸಾದಂತೆ ಕಂಡುಬರುವುದು ಮತ್ತು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತದೆ. 
ಈ ಎಲ್ಲ ಸಮಸ್ಯೆಗಳಿಗೆ ಏನಾದರೊಂದು ಪರಿಹಾರ ಕಂಡುಹಿಡಿಯಲೇಬೇಕೆಂದು ರಾಹುಲ್ ಮನಸ್ಸಲ್ಲಿ ಓಡಾಡುತ್ತಿತ್ತು. ಅದಕ್ಕೆ ವೇದಿಕೆ ಸಿಕ್ಕಿದ್ದು ಯುರೇಕಾದವರು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರ. ರಾಹುಲ್ ಮತ್ತು ಆತನ ಸ್ನೇಹಿತ ಗಿರೀಶ್, ನೀರಿನಲ್ಲಿ ಸೇರಿರುವ ವಿಷಕಾರಿ ಅಂಶಗಳನ್ನು ಪತ್ತೆಹಚ್ಚಲು ಅಗ್ಗದ ಮತ್ತು ನಿಖರವಾದ ಕಲರಿಮೀಟರ್ ನ್ನು ವಿನ್ಯಾಸಗೊಳಿಸಿದ್ದಾರೆ.
ಇಂದು ಮಾರುಕಟ್ಟೆಯಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಲು ಹಲವು ಪರಿಹಾರಗಳಿವೆ. ಅವುಗಳಲ್ಲೊಂದು ಆಸ್ಕೋರ್ಬಿಕ್ ಆಮ್ಲದ ಒಂದು ವಿಧಾನ.
ಇದರ ವೆಚ್ಚ ತುಸು ಹೆಚ್ಚು. ಸಾಮಾನ್ಯವಾಗಿ ನೀರಿನಲ್ಲಿ ಫೊಲ್ಫೇಟ್ ಪ್ರಮಾಣವನ್ನು ಪತ್ತೆಹಚ್ಚಲು 7,000ದಷ್ಟು ವೆಚ್ಚವಾಗುತ್ತದೆ. ಸಣ್ಣ ರೈತರಿಗೆ ಇದನ್ನು ಭರಿಸುವುದು ಕಷ್ಟ. ಹಾಗಾಗಿ ಅತ್ಯಂತ ಕನಿಷ್ಟ 500 ರೂಪಾಯಿಗೆ ಸಾಧನವನ್ನು ತಯಾರಿಸಲು ಪ್ರಯತ್ನಿಸಿದೆವು. ಇದು ಅತ್ಯಂತ ಚಿಕ್ಕದಾಗಿದ್ದು, ಕೈಯಲ್ಲಿ ತೆಗೆದುಕೊಂಡು ಹೋಗಬಲ್ಲ, ಹಗುರ ಸಾಧನವಾಗಿದೆ. ತಾವು ವಿನ್ಯಾಸೊಳಿಸಿದ ಸಾಧನ ದೊಡ್ಡದಲ್ಲದಿದ್ದರೂ ರೈತರಿಗೆ ಉಪಯೋಗವಾಗಬಲ್ಲದು ಎನ್ನುತ್ತಾನೆ ರಾಹುಲ್.
ತಾವು ತಯಾರಿಸಿದ ಸಾಧನವನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ ಮಾರಾಟ ಮಾಡುವ ಪ್ರಯತ್ನ ರಾಹುಲ್ ಮತ್ತು ಗಿರೀಶ್ ರದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT