ಎಸ್ ಎಲ್ ಭೈರಪ್ಪನವರ ನೂತನ ಕಾದಂಬರಿ 'ಉತ್ತರಕಾಂಡ'
ಬೆಂಗಳೂರು: ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ನೂತನ ಕಾದಂಬರಿ 'ಉತ್ತರಕಾಂಡ' ಸೋಮವಾರ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ.
ಮೊದಲ ದಿನವೇ 'ಉತ್ತರಕಾಂಡ' ಪುಸ್ತಕದ ಮೊದಲ ಆವೃತ್ತಿ ಬಿಕರಿಯಾಗಿವೆ ಎಂದು ತಿಳಿಸುತ್ತಾರೆ ಪುಸ್ತಕದ ಪ್ರಕಾಶಕರಾದ ಸಾಹಿತ್ಯ ಭಂಡಾರದ ರಾಜು. ಮಾರುಕಟ್ಟೆಯಲ್ಲಿ ವಿತರಕರು, ಮಾರಾಟಗಾರರಿಂದ ಭಾರಿ ಬೇಡಿಕೆ ಬಂದಿದ್ದು, ಪುಸ್ತಕಗಳ ಪೂರೈಕೆ ವ್ಯತಯ ಕೂಡ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪುಸ್ತಕ ಪಡೆದ ಓದುಗ ಅಭಿಮಾನಿಗಳು, ಪುಸ್ತಕದ ಜೊತೆಗೆ ಸೆಲ್ಫಿ ತೆಗೆದು ಪ್ರಕಟಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ರಾಮಾಯಣದ ಒಂದು ಭಾಗವಾಗಿರುವ 'ಉತ್ತರಕಾಂಡ'ವನ್ನು ಕಾದಂಬರಿ ರೂಪಕ್ಕೆ ಇಳಿಸಿದ್ದಾರೆ ಭೈರಪ್ಪ. ಈ ಹಿಂದೆ ಮಹಾಭಾರತವನ್ನು ಕೂಡ ಕಾದಂಬರಿ ರೂಪದಲ್ಲಿ ಬರೆದಿದ್ದ 'ಪರ್ವ' ಭಾರಿ ಜನಪ್ರಿಯತೆ ಪಡೆದಿತ್ತು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಗಳಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos