ಧ್ವಜಾರೋಹಣ ಮಾಡಿದ ಲಕ್ಷ್ಮಮ್ಮ 
ರಾಜ್ಯ

ಕಸ ಗುಡಿಸುವಾಕೆ ಕೈಯಲ್ಲಿ ಧ್ವಜಾರೋಹಣ ಮಾಡಿಸಿ ವಿಶಿಷ್ಟತೆ ಮೆರೆದ ಕುಮಾರಸ್ವಾಮಿ ಲೇಔಟ್ ಪೊಲೀಸರು

68ನೇ ಗಣರಾಜ್ಯೋತ್ಸವ ಸಂಭ್ರಮ ದೇಶಾದ್ಯಂತ ವಿಜೃಂಭಣೆಯಿಂದ ನಡೆದರೆ ಇತ್ತ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಮಾತ್ರ...

ಬೆಂಗಳೂರು: 68ನೇ ಗಣರಾಜ್ಯೋತ್ಸವ ಸಂಭ್ರಮ ದೇಶಾದ್ಯಂತ ವಿಜೃಂಭಣೆಯಿಂದ ನಡೆದರೆ ಇತ್ತ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಮಾತ್ರ ಭಾವನಾತ್ಮಕ ಸಂದರ್ಭಕ್ಕೆ ಸಾಕ್ಷಿಯಾಗಿತ್ತು. 
ಸುಮಾರು 23 ವರ್ಷಗಳಿಂದ ಪೊಲೀಸ್ ಆವರಣವನ್ನು ಸ್ವಚ್ಛಗೊಳಿಸುತ್ತಿರುವ 75 ವರ್ಷದ ಲಕ್ಷ್ಮಮ್ಮ ಅವರಿಂದ ಪೊಲೀಸರು ಧ್ವಜಾರೋಹಣ ಮಾಡಿಸಿದ್ದಾರೆ. ಇದರಿಂದ ದಿಗ್ಬಾಂತರಾದ ಲಕ್ಷ್ಮಮ್ಮ ಅವರು ಸ್ವಲ್ಪ ವಿಚಲಿತರಾದರೂ ನಂತರ ಹೆಮ್ಮಿಯಿಂದ ಧ್ವಜಾರೋಹಣ ಮಾಡಿದರು. 
ದಿನಂ ಪ್ರತಿ ಬೆಳಗ್ಗೆ 6 ಗಂಟೆಗೆ ಸ್ವಚ್ಛಗೊಳಿಸಲು ಪೊಲೀಸ್ ಠಾಣೆಗೆ ಬರುವ ಲಕ್ಷ್ಮಮ್ಮ ಅವರು ಗಣರಾಜ್ಯೋತ್ಸವ ದಿನವಾದ ನಿನ್ನೆ ಸಹ ಬೆಳಗ್ಗೆ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಠಾಣೆಯ ಮುಖ್ಯ ಅಧಿಕಾರಿ ರವಿ ಪಾಟೀಲ್ ಅವರು ಲಕ್ಷ್ಮಮ್ಮ ಅವರನ್ನು ಕರೆದು ಧ್ವಜಾರೋಹಣ ಮಾಡುವಂತೆ ಸೂಚಿಸಿದರು. 
ಇದರಿಂದ ಹರ್ಷಗೊಂಡ ಲಕ್ಷ್ಮಮ್ಮ ನನ್ನು ಕನಸು ಮನಸ್ಸಿನಲ್ಲಿ ನಾನು ಧ್ವಜಾರೋಹಣ ಮಾಡುವೆ ಎಂದು ಭಾವಿಸಿರಲಿಲ್ಲ ಆದರೆ. ಅಧಿಕಾರಿಗಳು ನನ್ನ ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡಿತು. ಇದು ನನ್ನ ಜೀವನ ಇರುವವರೆಗೂ ನೆನಪಿಸಿಕೊಳ್ಳುವುದಾಗಿ ಲಕ್ಷ್ಮಮ್ಮ ಹೇಳಿದ್ದಾರೆ. 
ಕುಮಾರಸ್ವಾಮಿ ಲೇಔಟ್ ನಲ್ಲಿ ಪೊಲೀಸ್ ಠಾಣೆ ಆರಂಭಗೊಂಡಾಗಿನಿಂದ ಲಕ್ಷ್ಮಮ್ಮ ಅವರೇ ಠಾಣೆಯ ಆವರನ್ನು ಸ್ವಚ್ಛಗೊಳಿಸುತ್ತಾ ಬಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India–US trade row: 'ಎಲ್ಲವೂ ಬದಲಾಗಿದೆ.. ಪ್ರಧಾನಿ ಮೋದಿ ಕೋಪಗೊಂಡಿದ್ದಾರೆ..': ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್! Video

'ವಿಶ್ವವಿದ್ಯಾಲಯ ದ್ವೇಷದ ಪ್ರಯೋಗಾಲಯವಾಗಲು ಸಾಧ್ಯವಿಲ್ಲ': ಮೋದಿ ವಿರೋಧಿ ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ JNU ಎಚ್ಚರಿಕೆ!

ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿ ಸಾವು; ಕಳ್ಳ ಎಂದು ಅಟ್ಟಾಡಿಸಿದ ಜನ, ನಾಲೆಗೆ ಬಿದ್ದು ಪ್ರಾಣಬಿಟ್ಟ ಅಮಾಯಕ!

ಪ್ರೀತ್ಸೆ.. ಪ್ರೀತ್ಸೆ..: ಭಗ್ನಪ್ರೇಮಿ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ!

ಉತ್ತರ ಪ್ರದೇಶ SIR: ಕರಡು ಪಟ್ಟಿಯಿಂದ 2.89 ಕೋಟಿ ಮತದಾರರು ಡಿಲೀಟ್; ಇದು ದೇಶದಲ್ಲಿಯೇ ಅತಿ ಹೆಚ್ಚು!

SCROLL FOR NEXT