ರಾಜ್ಯ

ಕನಕಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಕ್ಯಾಂಟರ್ ಡಿಕ್ಕಿ: ಸ್ಧಳದಲ್ಲೇ ಐವರ ಸಾವು

Shilpa D
ಬೆಂಗಳೂರು: ಕ್ಯಾಂಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಕನಕಪುರದ ತೊಪ್ಪಗಾನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು ಕನಕಪುರ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು ಕಾರು ಕನಕಪುರದಿಂದ ಬೆಂಗಳೂರಿನ ಕಡೆ ಸಂಚರಿಸುತ್ತಿದ್ದು ಎನ್ನಲಾಗಿದೆ. 
ವಿದ್ಯಾರಣ್ಯಪುರ ನಿವಾಸಿ ಚಂದ್ರು  ಮತ್ತು ಚಾಲಕ ಆಂದ್ರಪ್ರದೇಶದ ರಾಜು ಎಂಬ ಇಬ್ಬರ ಶವಗಳನ್ನು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ. ಉಳಿದ ಮೂವರ ಗುರುತು ಪತ್ತೆಯಾಗಿಲ್ಲ.
ಸಂಜೆ ಸುಮಾರು 7.30 ರ ವೇಳೆಗೆ ಕಾರು ಬೆಂಗಳೂರು ಕಡೆಗೆ ಸಂಚರಿಸುತ್ತಿತ್ತು, ಎದುರಿನಿಂದ ಕ್ಯಾಂಟರ್ ಕಾರಿಗೆ ಬಂದು ಅಪ್ಪಳಿಸಿದೆ, ಅಪ್ಪಳಿಸಿದ ರಭಸಕ್ಕೆ ಕಾರು ಕ್ಯಾಂಟರ್ ಕೆಳಗೆ ಸಿಲುಕಿದೆ, ನಂತರ ಅರ್ಥ್ ಮೂವರ್ ನಿಂದ ವಾಹನಗಳ ಭಾಗಗಳನ್ನು ಬಿಡಿ ಬಿಡಿಯಾಗಿಸಿ ನಂತರ ಶವಗಳನ್ನು ಹೊರ ತೆಗೆಯಲಾಗಿದೆ.
ಶವಗಳನ್ನು ಹೊರತೆಗೆಯಲು 1 ಗಂಟೆಗೂ ಅಧಿಕ ಸಮಯ ಬೇಕಾಯಿತು.  ಮೊಬೈಲ್ ಏನು ಇಲ್ಲದ ಕಾರಣ ಉಳಿದ ಮೂವರು ಶವಗಳ ಗುರುತು ಪತ್ತೆ ಹಚ್ಚುವುದು ತುಂಬಾ ಕಷ್ಟದ ಕೆಲಸವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  ಶವಗಳನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.  ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
SCROLL FOR NEXT