ಸರ್ಕಾರಿ ಗೌರವಗಳೊಂದಿಗೆ ಬಿಎಸ್ ಎಫ್ ಯೋಧನ ಅಂತ್ಯಕ್ರಿಯೆ
ತುಮಕೂರು: ಜಮ್ಮುವಿನ ರಜೌರಿಯಲ್ಲಿ ಭಾನುವಾರ ಹೃದಯಾಘಾತದಿಂದ ಸಾವನ್ನಪ್ಪಿದ ತುಮಕೂರಿನ ಬಿಎಸ್ ಎಫ್ ಯೋಧ ಕೆ.ಆರ್ ಮಂಜುನಾಥ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶಿರಾ ತಾಲೂಕಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆಯಿತು.
1998 ರಲ್ಲಿ ಸೇವೆಗೆ ಸೇರ್ಪಡೆಯಾಗಿದ್ದ ಮಂಜುನಾಥ್ ಅವರಿಗೆ ಪತ್ನಿ ಸುನೀತಾ ಮತ್ತು ಇಬ್ಬರು ಮಕ್ಕಳಿದ್ದಾರೆ. ತುಂಬಾ ಶ್ರಮಜೀವಿಯಾಗಿದ್ದ ಮಂಜುನಾಥ್, ಕಳೆದ ಒಂದು ವರ್ಷದ ಹಿಂದೆ ಗ್ರಾಮಕ್ಕೆ ಬಂದಿದ್ದರು ಎಂದು ನೆರೆಯವರಾದ ಅಶ್ವತ್ಥ, ಚಿಕ್ಕಣ್ಣ ಮತ್ತು ಚಿದಾನಂದ ಅವರು ಹೇಳುತ್ತಾರೆ.
ಮಂಜುನಾಥ್ ಅವರ ಪುತ್ರನಿಗೆ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಶಿರಾ ಶಿಕ್ಷಣ ತಜ್ಞರು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ, ಟಿ.ಬಿ ಜಯಚಂದ್ರ, ಮಾಜಿ ಸಚಿವ ಬಿ. ಸತ್ಯನಾರಾಯಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ ಮಂಜುನಾಥ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನು ಈ ವೇಳೆ ಉಪಸ್ಥಿತರಿದ್ದ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಅವರು, ಮಂಜುನಾಥ್ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos