ಪ್ರವಾಸಿಗರನ್ನು ರಕ್ಷಿಸುತ್ತಿರುವ ಗ್ರಾಮಸ್ಥರು 
ರಾಜ್ಯ

ಗಗನಚುಕ್ಕಿ: ಸಾವಿನ ದವಡೆಯಿಂದ ತಮಿಳುನಾಡು ಪ್ರವಾಸಿಗರನ್ನು ರಕ್ಷಿಸಿದ ಗ್ರಾಮಸ್ಥರು

ಗಗನಚುಕ್ಕಿ ಜಲಪಾತದ ನೀರು ನಿನ್ನೆ ಅಪಾಯದ ಮಟ್ಟ ಮೀರಿದ್ದರಿಂದ ತಮಿಳುನಾಡಿನ ಐವರು ಪ್ರವಾಸಿಗರು ಪ್ರಾಣಾಪಾಯದಿಂದ...

ಮೈಸೂರು: ಗಗನಚುಕ್ಕಿ ಜಲಪಾತದ ನೀರು ನಿನ್ನೆ ಅಪಾಯದ ಮಟ್ಟ ಮೀರಿದ್ದರಿಂದ ತಮಿಳುನಾಡಿನ ಐವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ತಮಿಳುನಾಡು ಮೂಲದ ನಾಲ್ವರು ಪುರುಷರು ಮತ್ತು ಓರ್ವ ಮಹಿಳೆ ಪಿಕ್ ನಿಕ್ ಗೆಂದು ಗಗನಚುಕ್ಕಿಗೆ ಬಂದಿದ್ದರು. ನದಿಗೆ ಇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ಆದರೆ ಒಂದು ಹಂತದಲ್ಲಿ ನದಿಯ ನೀರು ಅಪಾಯದ ಮಟ್ಟ ಮೀರಿತು. ಆಗ ನಿಜಕ್ಕೂ ಈ ಐವರು ದಿಗಿಲುಗೊಂಡರು. ಕ್ಷಣಮಾತ್ರದಲ್ಲಿ ನದಿಯಲ್ಲಿದ್ದ ಬಂಡೆಯೊಂದಕ್ಕೆ ಹತ್ತಿದರು. ನದಿಯ ನೀರು ಬಂಡೆಯವರೆಗೆ ಬಾರದಿರಲಿ ಎಂದು ಪ್ರಾರ್ಥನೆ ಮಾಡುತ್ತಾ ಆ ಬಂಡೆಯಲ್ಲಿಯೇ 2 ಗಂಟೆಗೂ ಹೆಚ್ಚು ಕಾಲ ತಂಗಿದ್ದರು. ಆಗ ಗ್ರಾಮಸ್ಥರು ಅವರನ್ನು ನೋಡಿ ಏಣಿಯನ್ನು ನದಿಯ ಬಂಡೆಗೆ ಇಟ್ಟು ಆ ಮೂಲಕ ಹತ್ತಿರದ ಬಂಡೆಗೆ ಹೋಗಿ ನದಿ ದಡಕ್ಕೆ ತಲುಪುವಲ್ಲಿ ಯಶಸ್ವಿಯಾದರು. 
ಸಾವಿನ ದವಡೆಯಿಂದ ರಕ್ಷಿಸಿದ ಗ್ರಾಮಸ್ಥರಿಗೆ ತಮಿಳುನಾಡಿನ ಪ್ರವಾಸಿಗರು ಧನ್ಯವಾದ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! Video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT