ಪ್ರವಾಸಿಗರನ್ನು ರಕ್ಷಿಸುತ್ತಿರುವ ಗ್ರಾಮಸ್ಥರು 
ರಾಜ್ಯ

ಗಗನಚುಕ್ಕಿ: ಸಾವಿನ ದವಡೆಯಿಂದ ತಮಿಳುನಾಡು ಪ್ರವಾಸಿಗರನ್ನು ರಕ್ಷಿಸಿದ ಗ್ರಾಮಸ್ಥರು

ಗಗನಚುಕ್ಕಿ ಜಲಪಾತದ ನೀರು ನಿನ್ನೆ ಅಪಾಯದ ಮಟ್ಟ ಮೀರಿದ್ದರಿಂದ ತಮಿಳುನಾಡಿನ ಐವರು ಪ್ರವಾಸಿಗರು ಪ್ರಾಣಾಪಾಯದಿಂದ...

ಮೈಸೂರು: ಗಗನಚುಕ್ಕಿ ಜಲಪಾತದ ನೀರು ನಿನ್ನೆ ಅಪಾಯದ ಮಟ್ಟ ಮೀರಿದ್ದರಿಂದ ತಮಿಳುನಾಡಿನ ಐವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ತಮಿಳುನಾಡು ಮೂಲದ ನಾಲ್ವರು ಪುರುಷರು ಮತ್ತು ಓರ್ವ ಮಹಿಳೆ ಪಿಕ್ ನಿಕ್ ಗೆಂದು ಗಗನಚುಕ್ಕಿಗೆ ಬಂದಿದ್ದರು. ನದಿಗೆ ಇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ಆದರೆ ಒಂದು ಹಂತದಲ್ಲಿ ನದಿಯ ನೀರು ಅಪಾಯದ ಮಟ್ಟ ಮೀರಿತು. ಆಗ ನಿಜಕ್ಕೂ ಈ ಐವರು ದಿಗಿಲುಗೊಂಡರು. ಕ್ಷಣಮಾತ್ರದಲ್ಲಿ ನದಿಯಲ್ಲಿದ್ದ ಬಂಡೆಯೊಂದಕ್ಕೆ ಹತ್ತಿದರು. ನದಿಯ ನೀರು ಬಂಡೆಯವರೆಗೆ ಬಾರದಿರಲಿ ಎಂದು ಪ್ರಾರ್ಥನೆ ಮಾಡುತ್ತಾ ಆ ಬಂಡೆಯಲ್ಲಿಯೇ 2 ಗಂಟೆಗೂ ಹೆಚ್ಚು ಕಾಲ ತಂಗಿದ್ದರು. ಆಗ ಗ್ರಾಮಸ್ಥರು ಅವರನ್ನು ನೋಡಿ ಏಣಿಯನ್ನು ನದಿಯ ಬಂಡೆಗೆ ಇಟ್ಟು ಆ ಮೂಲಕ ಹತ್ತಿರದ ಬಂಡೆಗೆ ಹೋಗಿ ನದಿ ದಡಕ್ಕೆ ತಲುಪುವಲ್ಲಿ ಯಶಸ್ವಿಯಾದರು. 
ಸಾವಿನ ದವಡೆಯಿಂದ ರಕ್ಷಿಸಿದ ಗ್ರಾಮಸ್ಥರಿಗೆ ತಮಿಳುನಾಡಿನ ಪ್ರವಾಸಿಗರು ಧನ್ಯವಾದ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮನ್ರೇಗಾ ಹೆಸರು ಬದಲಾವಣೆಗೆ ವಿರೋಧ: ನಾಳೆ ಕಾಂಗ್ರೆಸ್​ನಿಂದ ರಾಜಭವನ ಚಲೋ- DCM ಡಿಕೆ ಶಿವಕುಮಾರ್

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ಸಿದ್ದರಾಮಯ್ಯ ಆಕ್ರೋಶ ಬೆನ್ನಲ್ಲೇ​ ರಾಜೀವ್ ಗೌಡ ಬಂಧಿಸಿದ ಪೊಲೀಸರು!

News headlines 26-01-2026| R-Day: ಸರ್ಕಾರದ ಭಾಷಣ ಸಂಪೂರ್ಣ ಓದಿದ ರಾಜ್ಯಪಾಲರು; ಶತಾವಧಾನಿ ಗಣೇಶ್ ಸೇರಿ ರಾಜ್ಯದ 8 ಸಾಧಕರಿಗೆ ಪದ್ಮ ಪ್ರಶಸ್ತಿ; ಶಿವಮೊಗ್ಗ-ಭದ್ರಾವತಿ ರಸ್ತೆಯಲ್ಲಿ ಭೂಕುಸಿತ: ಬದಲಿ ಸಂಚಾರ ಮಾರ್ಗ

ಭಾರತದಲ್ಲಿ ಹಿಂದೂಗಳಿಂದಾಗಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ: ಅಸ್ಸಾಂ ಚುನಾವಣೆಗೂ ಮುನ್ನ ಮೌಲಾನಾ ಬದ್ರುದ್ದೀನ್ ಹೇಳಿಕೆ!

'Op Sindoor: ಭಾರತೀಯ ವಾಯುಪಡೆಯ ಸಾಮರ್ಥ್ಯ ನೋಡಿಯೇ ಬೆಚ್ಚಿಬಿದ್ದ ಪಾಕಿಸ್ತಾನ ಕದನ ವಿರಾಮಕ್ಕೆ ಒತ್ತಾಯಿಸಿತ್ತು': ಸ್ವಿಸ್ ವರದಿ

SCROLL FOR NEXT