ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ(ಫೋಟೋ ಕೃಪೆ-ಎಎನ್ಐ ಸುದ್ದಿ ಸಂಸ್ಥೆ) 
ರಾಜ್ಯ

ರಾಯಚೂರು: ಮಹಿಳಾ ಸಹೋದ್ಯೋಗಿ ಮೇಲೆ ಗುತ್ತಿಗೆ ನೌಕರನಿಂದ ಹಲ್ಲೆ, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಇಲ್ಲಿನ ಸಿಂಧನೂರು ನಗರ ಪಾಲಿಕೆಯಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿ ಮೇಲೆ ಅವರ ಸಹೋದ್ಯೋಗಿಯೊಬ್ಬರು....

ರಾಯಚೂರು: ಇಲ್ಲಿನ ಸಿಂಧನೂರು ನಗರ ಪಾಲಿಕೆಯಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿ ಮೇಲೆ ಅವರ ಸಹೋದ್ಯೋಗಿಯೊಬ್ಬರು ಕ್ರೂರವಾಗಿ ಹೊಡೆಯುವ ಮತ್ತು ಹಲ್ಲೆ ಮಾಡುವ  ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೊನ್ನೆ ಶನಿವಾರ ನಡೆದ ಘಟನಾವಳಿಗಳು ಸಿಸಿಟಿವಿ ಕ್ಯಾಮರಾದಿಂದ ಬೆಳಕಿಗೆ ಬಂದಿದ್ದು, ಇದರಲ್ಲಿ ಶರಣಪ್ಪ ಎಂಬವರು ನಸ್ರೀನ್ ಎಂಬುವವರಿಗೆ ತಡವಾಗಿ ಕಚೇರಿಗೆ ಕೆಲಸಕ್ಕೆ ಬಂದದ್ದಕ್ಕೆ ಹೊಡೆಯುವ ದೃಶ್ಯ ಕಂಡುಬಂದಿದೆ.
ಸಿಂಧನೂರು ನಗರ ಪಾಲಿಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ನಸ್ರೀನ್, ರಂಜಾನ್ ತಿಂಗಳಾಗಿರುವುದರಿಂದ ಈಗ ಉಪವಾಸದಲ್ಲಿದ್ದಾರೆ. ರಂಜಾನ್ ಆಗಿದ್ದರಿಂದ ಅಂದು ಬೆಳಗ್ಗೆ ಕೆಲಸಕ್ಕೆ ಬರುವುದು ತಡವಾಗಿತ್ತು. ಮೊನ್ನೆ ಶನಿವಾರ ಸರ್ಕಾರಿ ರಜೆ ಇತ್ತಾದರೂ ಶರಣಪ್ಪ ಮತ್ತು ನಸ್ರೀನ್ ಹೆಚ್ಚಿನ ಕೆಲಸ ಮುಗಿಸಿ ಹೋಗಲೆಂದು ಕಚೇರಿಗೆ ಬಂದಿದ್ದರು. 
ವಿಡಿಯೊದಲ್ಲಿ, ಗುತ್ತಿಗೆ ಕೆಲಸ ಮಾಡುತ್ತಿರುವ ಕಂಪ್ಯೂಟರ್ ನಿರ್ವಾಹಕರಾಗಿರುವ ಶರಣಪ್ಪ ನಸ್ರೀನ್ ಅವರನ್ನು ಬರುವುದಕ್ಕೆ ಏಕೆ ತಡವಾಯಿತು ಎಂದು ಪ್ರಶ್ನಿಸಿ ಒದೆಯುತ್ತಿದ್ದಾರೆ.
ನಂತರ ನಸ್ರೀನ್ ಕಚೇರಿ ಬಿಟ್ಟು ಹೊರಬರುತ್ತಿರುವ ದೃಶ್ಯವಿದೆ. ಆದರೆ ಇನ್ನೊಂದು ವಿಡಿಯೋದಲ್ಲಿ ಶರಣಪ್ಪ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಹೊಡೆಯುತ್ತಿರುವ ದೃಶ್ಯವಿದೆ. ಶರಣಪ್ಪ ನಸ್ರೀನ್ ಮೇಲೆ ಹಲ್ಲೆ ಮಾಡುವುದು ಇದೇ ಮೊದಲ ಸಲವೇನಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಪ್ಪನ ಕೃತ್ಯದಿಂದ ನೊಂದ ಮಹಿಳೆ ನಸ್ರೀನ್ ಪೊಲೀಸರಿಗೆ ದೂರು ನೀಡಿದ್ದಾರೆ.ನಂತರ ಶರಣಪ್ಪನನ್ನು ಕೆಲಸದಿಂದ ವಜಾ ಮಾಡಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT