ಮುರುಳಿಧರ ಹಾಲಪ್ಪ 
ರಾಜ್ಯ

ರಾಜ್ಯದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ ಒದಗಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಸಂಸ್ಥೆ ನೆರವು

ರಾಜ್ಯದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ ಗಳಿಸಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಅಧಿಕೃತ ಎಜೆನ್ಸಿ ಮೂಲಕ ನೆರವು...

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ ಗಳಿಸಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಅಧಿಕೃತ ಎಜೆನ್ಸಿ ಮೂಲಕ ನೆರವು ನೀಡಲಿದೆ. 
ವಿದ್ಯಾರ್ಥಿಗಳ ಜ್ಞಾನ, ಸಾಮರ್ಥ್ಯ ಹಾಗೂ ಕೌಶಲ್ಯಗಳ ಆಧಾರದ ಮೇಲೆ ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗ ದೊರಕಿಸಿಕೊಡಲು ಸಹಾಯ ಮಾಡಲಿದೆ.
ಈ ಸಂಬಂಧ ಆಸ್ಟ್ರೇಲಿಯಾ, ಯುಎಇ, ಜಪಾನ್ ಮತ್ತು ಯೂರೋಪಿಯನ್ ದೇಶಗಳ ಜೊತೆ ಎಂಒಯುಗೆ ಸಹಿ ಮಾಡಲಾಗುವುದು. ಕೆಎಸ್ ಡಿಸಿಯ ಓವರ್ ಸಿಸ್ ಸೆಲ್ ಆಗಸ್ಟ್ ನಲ್ಲಿ ಅಧಿಕೃತವಾಗಿ ಕಾರ್ಯ ಆರಂಭಿಸಲಿದೆ.
ಖಾಸಗಿ ಏಜೆನ್ಸಿ ಪ್ರತಿ ವರ್ಷ 500 ರಿಂದ 1ಸಾವಿರ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಉದ್ಯೋಗದ ಮೇಲೆ ಕಳುಹಿಸುತ್ತಿದೆ. ಇದಕ್ಕಾಗಿ ಅವರು ಹೆಚ್ಚಿನ ಹಣ ತೆಗೆದುಕೊಳ್ಳುತ್ತಾರೆ. ಆದರೆ ಸರ್ಕಾರ ತಾನೇ ಏಜೆನ್ಸಿ ಆರಂಭಿಸಿ ಅರ್ಹರಾದವರನ್ನು, ಹಾಗೂ ಆಸಕ್ತರನ್ನು ವಿದೇಶಗಳಿಗೆ ಕಳುಹಿಸುತ್ತದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ ಹಾಲಪ್ಪ ಹೇಳಿದ್ದಾರೆ.
ಏಜೆನ್ಸಿ ಕೇವಲ ಬಿಎಸ್ಸಿ, ಬಿಕಾಂ, ಬಿಎ, ಬಿಸಿಎ ಪದವೀದರರನ್ನು ಮಾತ್ರ ಪರಿಗಣಿಸುತ್ತದೆ. ಡಿಪ್ಲಮಾ, ಪಾಲಿಟೆಕ್ನಿಕ್ ಮತ್ತು ಎಂಜಿನೀಯರ್ ಪದವೀಧರರು ಇದರಿಂದ ಹೊರಗುಳಿಯುತ್ತಾರೆ.
ಓವರ್ ಸೀಸ್ ಸೆಲ್ ಅಧಿಕೃತವಾಗಿ ಆರಂಭವಾದ ಮೇಲೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡು ಅವರ, ಕೌಶಲ್ಯ ಹಾಗೂ ಸಾಮರ್ಥ್ಯದ ಮೇಲೆ ಅವರಿಗೆ ಸೂಕ್ತ ಸ್ಥಳದಲ್ಲಿ ಉದ್ಯೋಗವಕಾಶ ಕೊಡಿಸಲಾಗುವುದು ಎಂದು ಹಾಲಪ್ಪ ತಿಳಿಸಿದ್ದಾರೆ.
ಐಟಿಐ, ಡಿಪ್ಲಮಾ ವಿದ್ಯಾರ್ಥಿಗಳಿಗೆ  3 ತಿಂಗಳ ತರಬೇತಿ ನೀಡಲು  ಆಸ್ಟ್ರೇಲಿಯಾ ಸರ್ಕಾರದೊಡನೆ  ಎಂಒಯುಗೆ ಸಹಿ ಮಾಡಲಾಗಿದೆ. ತರಬೇತಿ, ಆಹಾರ ಮತ್ತು ಉಚಿತ ವಸತಿ ನೀಡಲಾಗುವುದು. ರಾಜ್ಯ ಸರ್ಕಾರ ಅವರು ವಾಪಸ್ ಬರಲು ಟಿಕೆಟ್ ಒದಗಿಸುತ್ತದೆ. ತರಬೇತಿ ಪಡೆದವರಿಗೆ ಒಳ್ಳೆಯ ಅವಕಾಶ ಸಿಗಲಿದೆ ಎಂದು ಹಾಲಪ್ಪ ತಿಳಿಸಿದ್ದಾರೆ. ನಿಗಮಕ್ಕೆ ನೋಂದಾಯಿಸಿಕೊಳ್ಳುವ ಮುನ್ನ ವಿದ್ಯಾರ್ಥಿಗಳು ಪಾಸ್ ಪೋರ್ಟ್ ಸಿದ್ದ ಮಾಡಿಕೊಂಡಿರಬೇಕು ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

SCROLL FOR NEXT