ಸಾಂಕೇತಿಕ ಚಿತ್ರ 
ರಾಜ್ಯ

ಕದ್ದ ಬೈಕಿನ ಪೆಟ್ರೋಲ್ ಖಾಲಿಯಾಯ್ತು; ಪೊಲೀಸರಿಗೆ ಸಿಕ್ಕಿಬೀಳಲು ಅಷ್ಟೇ ಸಾಕಿತ್ತು!

ಬೈಕನ್ನು ಕದ್ದ ಇಬ್ಬರು ಕಳ್ಳರು ಅದರಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ಹಿಂತಿರುಗಿಸಲು ನೋಡುತ್ತಿದ್ದ ಸಂದರ್ಭದಲ್ಲಿ...

ಬೆಂಗಳೂರು: ಬೈಕನ್ನು ಕದ್ದ ಇಬ್ಬರು ಕಳ್ಳರು ಅದರಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ಹಿಂತಿರುಗಿಸಲು ನೋಡುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಮೊನ್ನೆ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರು ಮೇದಹಳ್ಳಿ ಸೇತುವೆ ಬಳಿ ಹೀರೋ ಮೆಸ್ಟ್ರೊ ಎಡ್ಜ್ ಬೈಕನ್ನು ತಳ್ಳಿಕೊಂಡು ಹೋಗುತ್ತಿರುವುದನ್ನು ಇಬ್ಬರು ಪೊಲೀಸರು ನೋಡಿದ್ದಾರೆ. ಅವರ ಬಗ್ಗೆ ಸಂಶಯ ಬಂದು ಪೊಲೀಸರು ಅವರ ಬಳಿ ಬಂದು ನೀವು ಎಲ್ಲಿಯವರು, ಬೈಕ್ ಎಲ್ಲಿಂದ ಎಂದೆಲ್ಲ ಪ್ರಶ್ನಿಸಿದ್ದಾರೆ. ಅಲ್ಲದೆ ಬೈಕಿನಲ್ಲಿ ಕೀ ಇಲ್ಲದಿರುವುದನ್ನು ಪೊಲೀಸರು ಗಮನಿಸಿದರು. ಪೊಲೀಸರು ಬೈಕಿನ ದಾಖಲೆಗಳನ್ನು ಕೇಳಿದಾಗ  ಅವರ ಬಳಿ ಇರಲಿಲ್ಲ. 
ಕೂಡಲೇ ಕಳ್ಳರನ್ನು ಬಂಧಿಸಿದ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದರು. ಅವರಲ್ಲಿ ಪೆರುಮಾಳ್ ಎನ್ನುವವನು ಪೊಲೀಸ್ ಠಾಣೆಗೆ ತಲುಪುವುದರೊಳಗೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮತ್ತೊಬ್ಬ ಆಂಧ್ರ ಪ್ರದೇಶ ಮೂಲದ ವಿಜಿನಾಪುರದಲ್ಲಿ ವಾಸಿಸುತ್ತಿರುವ 20 ವರ್ಷದ ಶಿವ ಎಂಬುವವನು ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಪೆರುಮಾಳ್ ಬೈಕ್ ತಳ್ಳಿಕೊಂಡು ಹೋಗಲು ಮಾತ್ರ ಬಂದಿದ್ದು ತನಗೆ ಆತನ ಜೊತೆ ಯಾವುದೇ ವೈಯಕ್ತಿಕ ಸಂಪರ್ಕವಿಲ್ಲ ಎಂದು ಶಿವ ಪೊಲೀಸರಿಗೆ ಹೇಳಿದ್ದಾನೆ. ಆದರೂ ಇವರಿಬ್ಬರು ಸ್ನೇಹಿತರೆಂದು ಸಂಶಯವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ. ತನಿಖೆ ಮುಂದುವರಿದಿದೆ. ಬೈಕ್ ಸಂಖ್ಯೆ KA-03-JJ-7737 ರ ಮಾಲಿಕರು ಯಾರೂ ಇದುವರೆಗೆ ಬಂದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT