ಸೋಮಶೇಖರ ರೆಡ್ಡಿ 
ರಾಜ್ಯ

ಶ್ರೀರಾಮಲು ಬೆನ್ನಿಗೆ ನಿಂತ ಸೋಮಶೇಖರ ರೆಡ್ಡಿ: ಕೇಸು ವಾಪಸ್ ಪಡೆಯಲು ಕರುಣಾಕರ ರೆಡ್ಡಿಗೆ ಆಗ್ರಹ

ಸಂಸದ ಶ್ರೀರಾಮುಲು ವಿರುದ್ಧ ತನ್ನ ಸಹೋದರ ಕರುಣಾಕರ ರೆಡ್ಡಿ ಹೂಡಿರುವ 10 ಸಿವಿಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಸೋಮಶೇಖರ್ ರೆಡ್ಡಿ ...

ಬಳ್ಳಾರಿ: ಸಂಸದ ಶ್ರೀರಾಮುಲು ವಿರುದ್ಧ ತನ್ನ ಸಹೋದರ ಕರುಣಾಕರ ರೆಡ್ಡಿ ಹೂಡಿರುವ 10 ಸಿವಿಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಸೋಮಶೇಖರ್ ರೆಡ್ಡಿ ಆಗ್ರಹಿಸಿದ್ದಾರೆ.

ಬಳ್ಳಾರಿಯ ಸುಷ್ಮಾ ಸ್ವರಾಜ್ ಕಾಲೋನಿ ನಿವೇಶನ ಹಂಚಿಕೆ ಕುರಿತಂತೆ ಉಲ್ಬಣವಾಗಿರುವ ಸಮಸ್ಯೆಯನ್ನು ನಮ್ಮ ನಮ್ಮಲ್ಲೆ ಬಗೆ ಹರಿಸಿಕೊಳ್ಳಬಹುದಿತ್ತು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಎಲ್ಲ ಸೋದರರ ರಾಜಕೀಯ ಬೆಳವಣಿಗೆಗೆ ಬಿ.ಶ್ರೀರಾಮುಲು ಅವರೇ ಕಾರಣೀಭೂತರು. ನಮಗೆ ಅವರೇ ಆಧಾರಸ್ತಂಭ,  ಅಂತಹ ವ್ಯಕ್ತಿಯ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡುವ ಮಟ್ಟಕ್ಕೆ ಹೋಗಬಾರದಿತ್ತು ಎನ್ನುವ ಮೂಲಕ ಹಿರಿಯ ಸೋದರನ ನಡೆಯನ್ನು ಖಂಡಿಸಿದರು.

ನ್ಯಾಯಾಲಯದಲ್ಲಿ ದಾವೆ ಹೂಡದಂತೆ ಕರುಣಾಕರರೆಡ್ಡಿ ಅವರಿಗೆ ಮನವಿ ಮಾಡಿದ್ದೆ. ದಾವೆ ಹೂಡಿದ ನಂತರವೂ ಹಿಂಪಡೆಯುವಂತೆ ಕೋರಿದ್ದೆ. ನಾವು ನಾಲ್ವರು ಒಂದೇ ಕುಟುಂಬದಂತೆ ಇದ್ದೆವು. ಇದನ್ನು ಕರುಣಾಕರ ರೆಡ್ಡಿ ಅವರು ಬ್ರೇಕ್‌ಮಾಡಿದರು.

ಕರುಣಾಕರರೆಡ್ಡಿ ಅವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸುವಲ್ಲಿ ಶ್ರೀರಾಮುಲು ಅವರ ಪಾತ್ರವಿಲ್ಲ. ಅವರ ಅಭಿಮಾನಿಗಳು ದಾವೆ ಹೂಡಿದ್ದಾರೆ. ಶ್ರೀರಾಮುಲು ಅಂತಹ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಅವರು ರಾಜ್ಯ ಮಟ್ಟದಲ್ಲಿ ಬೆಳೆದಿದ್ದಾರೆ. ನಾವೆಲ್ಲರೂ ಅವರ ಹಿಂಬಾಲಕರಾಗಿ ಅವರು ಹೇಳಿದಂತೆ ರಾಜಕೀಯ ಮಾಡುತ್ತಿದ್ದೇವೆ.

ಕರುಣಾಕರ ರೆಡ್ಡಿ ದೂರು ವಾಪಸ್ ಪಡೆದರೆ, ಅವರ ವಿರುದ್ಧ ಹೂಡಿರುವ ಜಾತಿ ನಿಂದನೆ ಪ್ರಕರಣ ಹಿಂದಕ್ಕೆ ಪಡೆಯುವಂತೆ ಶ್ರೀರಾಮುಲು ಅವರ ಅಭಿಮಾನಿಗಳಿಗೆ ಮನವಿ ಮಾಡುವೆ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT