ಪ್ರಪಾತಕ್ಕೆ ಬಿದ್ದ ಗೂಳಿಯ ರಕ್ಷಣೆ 
ರಾಜ್ಯ

ಉಡುಪಿ: 60 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದ ಗೂಳಿ ರಕ್ಷಣೆ ಮಾಡಿದ ಸಾಮಾಜಿಕ ಕಾರ್ಯಕರ್ತ

0 ಅಡಿ ಆಳದ ಪ್ರಪಾತಕ್ಕೆ ಬಿದ್ದ ಗೂಳಿಯನ್ನು ಸುರಕ್ಷಿತವಾಗಿ ಮೇಲಕ್ಕೇತ್ತಲಾಗಿದೆ. ನಗರದ ಹೊರ ವಲಯದಲ್ಲಿರುವ ಕುಕ್ಕಿಕಟ್ಟೆಯಲ್ಲಿ ಮೂರು ದಿನಗಳ ..

ಉಡುಪಿ: 60 ಅಡಿ ಆಳದ ಪ್ರಪಾತಕ್ಕೆ ಬಿದ್ದ ಗೂಳಿಯನ್ನು ಸುರಕ್ಷಿತವಾಗಿ ಮೇಲಕ್ಕೇತ್ತಲಾಗಿದೆ. ನಗರದ ಹೊರ ವಲಯದಲ್ಲಿರುವ ಕುಕ್ಕಿಕಟ್ಟೆಯಲ್ಲಿ ಮೂರು ದಿನಗಳ ಹಿಂದೆ ರೈಲ್ವೆ ಹಳಿ ಮೇಲ್ಗಡೆಯ ದಂಡೆಯಲ್ಲಿ ಮೇಯುತ್ತಿದ್ದ ಗೂಳಿಗೆ ರೈಲು ಡಿಕ್ಕಿ ಹೊಡೆದು ಪ್ರಪಾತಕ್ಕೆ ಬಿದ್ದಿತ್ತು.

ಮಂಗಳವಾರ ಬೆಳಗ್ಗೆ ಗೂಳಿ ಪ್ರಪಾತದಲ್ಲಿ ಬಿದ್ದಿರುವುದನ್ನು ನೋಡಿದ ಸಾಮಾಜಕ ಕಾರ್ಯಕರ್ತ ವಿಷ್ಣುಶೆಟ್ಟಿ ಕೂಡಲೇ ಅದರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದರು. ಆದರೆ ಪ್ರಪಾತಕ್ಕೆ ಬಿದ್ದು 2 ದಿನ ವಾಗಿದ್ದರಿಂದ ಆಹಾರ ನೀರು ಇಲ್ಲದೇ ಗೂಳಿ ಕೇವಲ ಉಸಿರಾಡುತ್ತಿತ್ತು.ಈ ವೇಳೆ ಅಲೆವೂರ್ ಯೂತ್ ಕ್ಲಬ್ ಗೂಳಿ ರಕ್ಷಿಸಲು ಕಾರ್ಯಾಚರಣೆ ಆರಂಭಿಸಿತು.

ಗೂಳಿಗೆ ನೀರು ಮತ್ತು ಮೇವು ನೀಡಲಾಯಿತು. ಕತ್ತಲಾಗಿದ್ದರಿಂದ ಕಾರ್ಯಾಚರಣೆ ಕಾರ್ಯ ಬುಧವಾರ ಬೆಳಗ್ಗೆಗೆ ಮುಂದೂಡಲಾಯಿತು. ಅರ್ಥ್ ಮೂವರ್ ಮೂಲಕ  ತಾತ್ಕಾಲಿಕ ರಸ್ತೆ ಮಾಡಿ ಚಲನೆಯಿಲ್ಲದೆ ಮಲಗಿದ್ದ ಗೂಳಿ ಇದ್ದ ಜಾಗಕ್ಕೆ ತೆರಳಿದರು. ಕ್ರೇನ್ ಬಳಸಿಕೊಂಡು ಗೂಳಿಯನ್ನು ಮೇಲೇತ್ತಲಾಯಿತು.

ಪಶು ವೈದ್ಯ ಡಾ. ಸಂದೀಪ್ ಶೆಟ್ಟಿ ಗೂಳಿಗೆ ಪ್ರಥಮ ಚಿಕಿತ್ಸೆ ನೀಡಿ ಗೂಳಿಯ ಸೊಂಟಕ್ಕೆ ಬೆಲ್ಟ್ ಕಟ್ಟಿ ಮೇಲಕ್ಕೆತ್ತಲಾಯಿತು. ಈ ವೇಳೆ ಗೂಳಿಗೆ ಅರಿವಳಿಕೆ ಮದ್ದು ನೀಡಿ ಮೇಲೆತ್ತಲಾಯಿತು. ಸುಮಾರು 3 ಗಂಟೆಗಳ ಕಾರ್ಯಾಚರಣೆ ನಂತರ ಗೂಳಿಯನ್ನು ಪ್ರಪಾತದಿಂದ ರಕ್ಷಿಸಲಾಯಿತು.ಗೂಳಿಯ ಮುಂದಿನ ಜವಾಬ್ದಾರಿಯನ್ನು ಕೂಡ ಈ ಯುವಕರೇ ವಹಿಸಿಕೊಂಡಿರೋದು ಶ್ಲಾಘನೀಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT