ವಿದ್ಯಾರ್ಥಿ 
ರಾಜ್ಯ

ಇಲಿ ಪಾಷಾಣ ಮಿಶ್ರಿತ ಆಹಾರ ಸೇವನೆ 3 ಹಾಸ್ಟೆಲ್ ವಿದ್ಯಾರ್ಥಿಗಳ ಸಾವಿಗೆ ಕಾರಣ

ಇಲಿ ಪಾಷಾಣ ಮಿಶ್ರಿತ ಆಹಾರ ಸೇವನೆಯಿಂದ ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿನ ವಿದ್ಯಾವಾರಿಧಿ ಅಂತಾರಾಷ್ಟ್ರೀಯ ಬೋರ್ಡಿಂಗ್ ಶಾಲೆಯ ಮೂವರು...

ಬೆಂಗಳೂರು: ಇಲಿ ಪಾಷಾಣ ಮಿಶ್ರಿತ ಆಹಾರ ಸೇವನೆಯಿಂದ ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿನ ವಿದ್ಯಾವಾರಿಧಿ ಅಂತಾರಾಷ್ಟ್ರೀಯ ಬೋರ್ಡಿಂಗ್ ಶಾಲೆಯ ಮೂವರು ವಿದ್ಯಾರ್ಥಿಗಳ ಸಾವು ಸಂಭವಿಸಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಸ್ಪಷ್ಟಪಡಿಸಿದೆ. 
ಬಿಜೆಪಿ ಮಾಜಿ ಶಾಸಕ ಕಿರುಣ್ ಕುಮಾರ್ ಅವರಿಗೆ ಸೇರಿದ ಬೋರ್ಡಿಂಗ್ ಶಾಲೆಯ ಮೂವರು ವಿದ್ಯಾರ್ಥಿಗಳಾದ ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ ಮತ್ತು ಶ್ರೇಯಸ್ ಎಂಬುವರು ಮೃತಪಟ್ಟಿದ್ದರು. ಇನ್ನು ಇದೇ ಆಹಾರ ಸೇವಿಸಿದ್ದ ವಸತಿ ಶಾಲೆಯ ಗಾರ್ಡ್ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೂರು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. 
ಮೃತರಾದ ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ, ಶ್ರೇಯಸ್ ಮತ್ತು ರಮೇಶ್ ಅವರ ಮೃತದೇಹವನ್ನು ಪರೀಕ್ಷಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರಿಗೆ ಅವರ ದೇಹದಲ್ಲಿ ಇಲಿ ಪಾಷಾಣ ಅಂಶವಿರುವುದನ್ನು ಗುರುತಿಸಿದ್ದಾರೆ. 
ಆರಂಭದಲ್ಲಿ ಮೃತ ವಿದ್ಯಾರ್ಥಿಗಳ ಮರಣೋತ್ತರ ಪರೀಕ್ಷೆ ವರದಿಯ ಪ್ರಾಥಮಿಕ ತನಿಖೆಯಿಂದ ಸಾರಿನಲ್ಲಿ ಅಲ್ಯೂಮಿನಿಯಂ ಪ್ರಾಸ್ಪೇಟ್ ಎಂಬ ಕೀಟನಾಶಕ ಬೆರಸಲಾಗಿತ್ತು ಎಂದು ತಿಳಿದಬಂದಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT