ಶೃಂಗೇರಿ ಮಠ 
ರಾಜ್ಯ

ಯೋಧರ ಜೀವ ಉಳಿಸುವ ಸಾಧನ ಅಭಿವೃದ್ಧಿಗೆ ಶೃಂಗೇರಿ ಮಠದ ನೆರವು

ಯೋಧರ ಜೀವ ಉಳಿಸುವ ಸಾಧನದ ಅಭಿವೃದ್ಧಿಗೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ ನೆರವು ನೀಡಿದೆ.

ಬೆಂಗಳೂರು: ಯೋಧರ ಜೀವ ಉಳಿಸುವ ಸಾಧನದ ಅಭಿವೃದ್ಧಿಗೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ ನೆರವು ನೀಡಿದೆ. 
ಬೆಂಗಳೂರು ದಕ್ಷಿಣದಲ್ಲಿರುವ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯೋಧರ ಜೀವ ಉಳಿಸಲು ನೆರವಾಗಬಲ್ಲಂತಹ 90 ಸೆಕೆಂಡ್ ಗಳಲ್ಲಿ ರಕ್ತ ಸ್ರಾವವನ್ನು ತಡೆಯುವ ಸಮರ್ಥ್ಯ ಹೊಂದಿರುವ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ ಶೃಂಗೇರಿ ಮಠ 30 ಕೋಟಿ ರೂಪಾಯಿ ನೆರವು ನೀಡಿದೆ. 
ಯುದ್ಧ ಭೂಮಿಯಲ್ಲಿ, ಗಡಿಯಲ್ಲಿ ಯೋಧ ರಕ್ತ ಸ್ರಾವದಿಂದ ಬಳಲುತ್ತಿದ್ದರೆ, ಅದನ್ನು ತಕ್ಷಣವೇ ತಡೆಗಟ್ಟುವ ಉದ್ದೇಶದಿಂದ ಈ ಹೊಸ ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಂಟಿಯಾಗಿ ಸಾಧನ ಅಭಿವೃದ್ಧಿಪಡಿಸಿರುವ ಎಂ ಎಸ್ ಸಂತೋಷ್ ಹಾಗೂ ದಿವಾಕರ ಎಂ.ಬಿ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 
ಕಾರ್ಬಾಕ್ಸಿಲ್ ಸಂಯೋಜಿತ ಗ್ರ್ಯಾಫೀನ್ ಸ್ಪಾಂಜ್ ನ್ನು (ಡಿಎಪಿಜಿಎಸ್) ಹೊಂದಿರುವ ಉತ್ಪನ್ನ ಆಕ್ಸಿಯೋಸ್ಟಾಟ್ ಬಳಕೆಯನ್ನು ಹೋಲುತ್ತದೆ. ಆದರೆ ಆಕ್ಸಿಯೋಸ್ಟಾಟ್ ಸಾಧನ 3-4 ನಿಮಿಷಗಳಲ್ಲಿ ರಕ್ತಸ್ರಾವವನ್ನು ತಡೆಗಟ್ಟಿದರೆ, ಹೊಸ ಸಾಧನ  90 ಸೆಕೆಂಡ್ ಗಳಲ್ಲಿ ರಕ್ತ ಸ್ರಾವವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದ್ದು, ಈ ಸಾಧನದ ಅಭಿವೃದ್ಧಿಗೆ ಶೃಂಗೇರಿ ಮಠ ನೆರವು ನೀಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT