ಕಾಂಕ್ರೀಟ್ ತ್ಯಾಜ್ಯ 
ರಾಜ್ಯ

ಕಾಂಕ್ರೀಟ್ ತ್ಯಾಜ್ಯವನ್ನು ಮಾಯಸಂದ್ರ ಕೆರೆಗೆ ಸುರಿಯುತ್ತಿರುವ ಮೆಟ್ರೋ ರೈಲ್ ಕಾರ್ಪ್

ಬೆಂಗಳೂರಿನ ಕೆರೆಗಳು ಒಂದೊಂದೇ ಕಲುಶಿತಗೊಳ್ಳುತ್ತಿದ್ದು, ಈಗ ಮೆಟ್ರೋ ರೈಲ್ ಕಾರ್ಪ್ ಸಹ ಕೆರೆಯನ್ನು ನಾಶ ಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರು: ಬೆಂಗಳೂರಿನ ಕೆರೆಗಳು ಒಂದೊಂದೇ ಕಲುಶಿತಗೊಳ್ಳುತ್ತಿದ್ದು, ಈಗ ಮೆಟ್ರೋ ರೈಲ್ ಕಾರ್ಪ್ ಸಹ ಕೆರೆಯನ್ನು ನಾಶ ಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಉತ್ತರಹಳ್ಳಿಯ ಮುಖ್ಯ ರಸ್ತೆಯ ಬಳಿ ಇರುವ ಮಾಯಸಂದ್ರ ಕೆರೆಗೆ ಮೆಟ್ರೋ ರೈಲ್ ಕಾರ್ಪ್ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. 
ಕೆರೆಯ ಬಳಿ ಹಾಗೂ ಬಫರ್ ಜೋನ್ ಗಳ ಬಳಿ ಒಣ ಅಥವಾ ಹಸಿ ತ್ಯಾಜ್ಯ ಸುರಿಯುವವರಿಗೆ 5 ಲಕ್ಷ ದಂಡ ವಿಧಿಸುವುದಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್ ಸಿಡಿಎ) ಎಚ್ಚರಿಕೆ ನೀಡಿದ್ದರೂ ಸಹ ಮಾಯಸಂದ್ರ ಕೆರೆಯ ಬಳಿ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. 
ಮನೀಷ್ ವಿ ಪ್ರಸಾದ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಕಾಂಕ್ರೀಟ್ ತ್ಯಾಜ್ಯ ಸುರಿಯುತ್ತಿರುವುದನ್ನು ಗಮನಿಸಿದ್ದಾರೆ. " ಎರಡು ವಾರಗಳ ಹಿಂದೆ ಮಾಯಸಂದ್ರ ಕೆರೆ-1 ರಲ್ಲಿ ಮೆಟ್ರೋ ಫೇಸ್-II  ರ ಕಾಮಗಾರಿಯ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯುತ್ತಿರುವುದನ್ನು ಗಮನಿಸಿದ್ದೆ. ಬಿಲ್ಡರ್ ಗಳು ಕಳೆದ ಎರಡು ತಿಂಗಳಿನಿಂದ ಈ ರೀತಿ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. 
ಕೆಂಗೇರಿಯಲ್ಲಿರುವ ಮಾಯಸಂದ್ರ ಕೆರೆ -1 ಹಾಗೂ ಕೆರೆ-2 ನ್ನು ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಈಗ ಕಾಂಕ್ರೀಟ್ ತ್ಯಾಜ್ಯ ಸುರಿಯಲಾಗುತ್ತಿರುವ ಕೆರೆ-1 ಸಂಪೂರ್ಣ ಒಣಗಿಹೋಗಿದೆ. ಈ ಬಗ್ಗೆ ಕೆಎಲ್ ಸಿಡಿಎ ಸಿಇಒ ವಿದ್ಯಾಸಾಗರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಬೆಂಗಳೂರು ನಗರ ವಿಭಾಗದ ಡಿಸಿಎಫ್ ಗೆ ಕ್ರಮ ಕೈಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT