ಬೆಂಗಳೂರು: ಮಂತ್ರಿಗಳು ಮತ್ತು ಶಾಸಕರುಗಳ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಸಾಲು ಸಾಲು ಆಗಮಿಸಿದ್ದರು. ಆದರೆ ಸಮಯಾಭಾವದಿಂದಾಗಿ ತಮ್ಮ ಅನೇಕ ಸಮಸ್ಯೆಗಳನ್ನು ಹೇಳಿಕೊಳ್ಳಲು, ಅಭಿಪ್ರಾಯ ಕೇಳಲು ಗುಂಪಾಗಿ ವೇಣುಗೋಪಾಲ್ ಅವರ ಬಳಿಗೆ ಹೋಗಬೇಕಾಯಿತು.
ಕಾಂಗ್ರೆಸ್ ನ ಅನೇಕ ಹಿರಿಯ ನಾಯಕರಿಗೆ ಪಕ್ಷದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಲು ಸಮಯವೇ ಸಿಗಲಿಲ್ಲ. ಅನೇಕ ಶಾಸಕರು ತಮ್ಮ ಜಿಲ್ಲೆಗಳು ಮತ್ತು ಆ ಜಿಲ್ಲೆಗಳಲ್ಲಿ ಸಂಘಟನೆ ಕೊರತೆ ಬಗ್ಗೆ ಹೇಳಿಕೊಂಡರು.
ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡದೆನ್ನುವಂತೆ ಬಿಂಬಿಸಲಾಯಿತು. ಎ.ಎಚ್. ವಿಶ್ವನಾಥ್ ನಂತಹ ಕೆಲವು ನಾಯಕರು ಹೇಳಿರುವಂತೆ ಪಕ್ಷದಲ್ಲಿ ಪರಿಸ್ಥಿತಿ ಅಷ್ಟು ಹದಗೆಟ್ಟಿದ್ದರೆ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಹಿರಿಯ ನಾಯಕರ ಅನಿಸಿಕೆಯಾಗಿದೆ.