ಬಂಧಿತ ಚಾಲಕ ದೇವರಾಜ್ ಬಂಧನ 
ರಾಜ್ಯ

ಶವ ಸಾಗಿಸುವಾಗ ಆಂಬುಲೆನ್ಸ್ ದುರ್ಬಳಕೆ: ಬೆಂಗಳೂರು ಪೊಲೀಸರಿಂದ ಚಾಲಕನ ಬಂಧನ

ಆಂಬುಲೆನ್ಸ್‌ನಲ್ಲಿ ಶವ ಸಾಗಿಸುವಾಗ ಸೈರನ್ ಬಳಸಿದ ಆರೋಪದ ಮೇಲೆ ಚಾಲಕ ದೇವರಾಜ್ ಎಂಬುವರನ್ನು ಬಂಧಿಸಿದ ಹಲಸೂರು ಗೇಟ್ ಸಂಚಾರ ಪೊಲೀಸರು, ..

ಬೆಂಗಳೂರು: ಆಂಬುಲೆನ್ಸ್‌ನಲ್ಲಿ ಶವ ಸಾಗಿಸುವಾಗ ಸೈರನ್ ಬಳಸಿದ ಆರೋಪದ ಮೇಲೆ ಚಾಲಕ ದೇವರಾಜ್ ಎಂಬುವರನ್ನು ಬಂಧಿಸಿದ ಹಲಸೂರು ಗೇಟ್ ಸಂಚಾರ ಪೊಲೀಸರು, ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾತ್ರ ಸೈರನ್ ಬಳಸಬೇಕು ಎಂದು ಮೋಟಾರು ವಾಹನ ಕಾಯ್ದೆ ಹೇಳುತ್ತದೆ. ಆದರೆ, ದೇವರಾಜ್  ಶವ ಸಾಗಿಸುವಾಗ ಸೈರನ್ ಹಾಕಿಕೊಂಡು ವೇಗವಾಗಿ ವಾಹನ ಚಲಾಯಿಸಿದ್ದಾರೆ. ಹೀಗಾಗಿ, ಅಜಾಗರೂಕ ಚಾಲನೆಯಿಂದ ಸಾರ್ವಜನಿಕರ ಜೀವಕ್ಕೆ ಕುತ್ತು ತಂದ (ಐಪಿಸಿ 279) ಆರೋಪದಡಿ ಬಂಧಿಸಲಾಗಿತ್ತು. ಕೆಎ05-ಎಸಿ6633 ಸಂಖ್ಯೆಯ ವಾಹನದಲ್ಲಿ ಶವವನ್ನು ಸಾಗಿಸುಲಾಗುತ್ತಿತ್ತು. 
ಆ್ಯಂುಬುಲೆನ್ಸ್‌ಗಳು ಇರುವುದು ರೋಗಿಗಳ ಜೀವ ರಕ್ಷಣೆಗಾಗಿ. ಆದರೆ, ಕೆಲ ಚಾಲಕರು ತಮ್ಮ ವೈಯಕ್ತಿಕ ಕೆಲಸಗಳಿಗೂ ಅವುಗಳನ್ನು ಬಳಸುತ್ತಿದ್ದಾರೆ. ಅದೂ ಸೈರನ್ ಹಾಕಿಕೊಂಡು ಹೋಗುತ್ತಿದ್ದಾರೆ. ಒಳಗೆ ರೋಗಿ ಇರಬಹುದೆಂದು ನಾವೂ ತಪಾಸಣೆ ಮಾಡುವ ಗೋಜಿಗೆ ಹೋಗುವುದಿಲ್ಲ. ಈ ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳದೆ, ಚಾಲಕರೇ ಆಂಬುಲೆನ್ಸ್‌ನ ಮಹತ್ವ ಅರಿಯಬೇಕು ಸಂಚಾರಿ ಪೊಲೀಸ್ ವಿಭಾಗದ ಡಿಸಿಪಿ ಆರ್ ಹಿತೇಂದ್ರ ತಿಳಿಸಿದ್ದಾರೆ.
ಇನ್ನೂ ಚಾಲಕರಿಗೆ ಸೈರನ್ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಅರಿವು ಮೂಡಿಸಬೇಕು, ಅನಾವಶ್ಯಕವಾಗಿ ಸೈರನ್ ಬಳಸದಂತೆ ತಿಳಿ ಹೇಳಬೇಕು ಎಂದು ಅವರು ವಿವರಿಸಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT