ರಾಜ್ಯ

ಕಬೋರ್ಡ್ ನಲ್ಲಿ ಶವ ಸಿಕ್ಕ ಪ್ರಕರಣ: ಮೊಮ್ಮಗನನ್ನು ಬಂಧಿಸಿದ ಕೆಂಗೇರಿ ಪೊಲೀಸರು

Shilpa D
ಬೆಂಗಳೂರು: ಅಜ್ಜಿಯನ್ನು ಕೊಂದು ಶವವನ್ನು ಕಬೋರ್ಡ್ ನಲ್ಲಿ ಬಚ್ಚಿಟ್ಟಿದ್ದ ಪ್ರಕರಣ ಸಂಬಂಧ ಕೆಂಗೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ,
2016ರ ಆಗಸ್ಟ್ ತಿಂಗಳಲ್ಲಿ ಶಾಂತಕುಮಾರಿ ಅವರಿಗೆ ತಿನ್ನಲು ಮೊಮ್ಮಗ ಸಂಜಯ್ ಊಟ ತಂದಿದ್ದ, ಆದರೆ ಶಾಂತಕುಮಾರಿ ತಿನ್ನಲು ನಿರಾಕರಿಸಿದ್ದರು, ಇದರಿಂದ ಕೋಪಗೊಂಡ ಸಂಜಯ್ ದೋಸೆ ಪ್ಯಾನ್ ನಿಂದ ತಲೆ ಮೇಲೆ ಹೊಡೆದಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. 
ಶಾಂತಕುಮಾರಿ ಪುತ್ರಿ ಹಾಗೂ ಸಂಜಯ್ ತಾಯಿ ಶಶಿಕಲಾ ಗೆ ಈ ವಿಷಯ ತಿಳಿಯಿತು. ಕೂಡಲೇ ಆಕೆ ಪೊಲೀಸರಿಗೆ ವಿಷಯ ತಿಳಿಸುವಂತೆ ಮಗನಿಗೆ ಹೇಳಿದ್ದಾರೆ. ಆದರೆ ತಾಯಿಯ ಮನವೊಲಿಸಿದ ಸಂಜಯ್ ಈ ವಿಷಯ ಹೇಳಿದರೆ ತನ್ನ ಭವಿಷ್ಯಕ್ಕೆ ತೊಂದರೆ ಉಂಟಾಗುತ್ತದೆ, ಹೀಗಾಗಿ ಯಾರಿಗೂ ಹೇಳುವುದು ಬೇಡವೆಂದು ತಿಳಿಸಿದ,
ತನ್ನ ಸ್ನೇಹಿತ ನಂದೀಶನಿಗೆ ಕರೆ ಮಾಡಿದ ಸಂಜಯ್ ಶವವನನ್ನು ಶಿಫ್ಟ್ ಮಾಡಲು ಸಹಾಯ ಕೋರಿದ್ದ, ಆದರೇ ಮನೆಯಿಂದ ಶವವನ್ನು ಹೊರಗೆ ಸಾಗಿಸುವುದು ಅಸಾಧ್ಯ ಎಂದು ತಿಳಿದ ನಂತರ, ಕಬೋರ್ಡ್ ನ ಒಳಗೆ  ಹಳ್ಳ ತೋಡಿ, ಅದರಲ್ಲಿ ಶವವನ್ನು ಹಾಕಿ, ನಂತರ ಶವವನ್ನು ಸಿಮೆಂಟ್ ನಿಂದ ಪ್ಲಾಸ್ಟರ್ ಮಾಡಿದ್ದರು.
ಎರಡು ದಿನ ಕಳೆದ ನಂತರ ಕಬೋರ್ಡ್ ನಿಂದ ಶವದ ವಾಸನೆ ಬಂದ ಹಿನ್ನೆಲೆಯಲ್ಲಿ ಶಶಿಕಲಾ ಮತ್ತು ಸಂಜಯ್ ಮನೆ ಬಿಟ್ಟು ತೆರಳಿದ್ದರು.
ಮೇ 7 ರಂದು ಮನೆ ಮಾಲೀಕ ನವೀನ್ ಮನೆಯಲ್ಲಿ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಷಯ ತಿಳಿಸಿದ್ದರು, ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಮೊದಲು ಸಂಜಯ್ ಸ್ನೇಹಿತ ನಂದೀಶ್ ನನ್ನು ಬಂಧಿಸಿದ್ದರು, ನಂತರ ಆತನ ವಿಚಾರಣೆ ನಡೆಸಿ ಶಿವಮೊಗ್ಗದ ಸಾಗರದಲ್ಲಿ ಸಂಜಯ್ ನನ್ನು ಬಂಧಿಸಿದ್ದಾರೆ. 
SCROLL FOR NEXT