ರಾಜ್ಯ

ಸಿದ್ದಗಾಂಗಾ ಶ್ರೀಗಳಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

Manjula VN
ತುಮಕೂರು: ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ನಡೆದಾಡುವ ದೇವರು, ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮಿಗಳ ಆರೋಗ್ಯಗ ಬಗ್ಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ದೂರವಾಣಿ ಕರೆ ಮಾಡುವ ಮೂಲಕ ವಿಚಾರಿಸಿದ್ದಾರೆ.
ಭಾನುವಾರ ಸಂಜೆ 5.10ರ ಸುಮಾರಿಗೆ ಕರೆ ಮಾಡಿದ ಪ್ರಧಾನಿ ಮೋದಿಯವರು 2 ನಿಮಿಷಗಳ ಕಾಲ ಮಾತನಾಡಿ ಶ್ರೀಗಳ ಅನಾರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. 
ಪ್ರಧಾನಿ ಮೋದಿಯವರ ದೂರವಾಣಿ ಕರೆಯನ್ನು ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳು ಸ್ವೀಕರಿಸಿದ್ದು, ಕರೆ ಸ್ವೀಕರಿದ ಬಳಿಕ ಸಿದ್ದಲಿಂಗ ಸ್ವಾಮಿಗಳು ಒಂದು ಕ್ಷಣ ಆಶ್ಚರ್ಯ ಚಕಿತರಾದರು. ಅಲ್ಲದೇ ಶ್ರೀಗಳ ಆರೋಗ್ಯದ ಬಗ್ಗೆ ಕಿರಿಯ ಶ್ರೀಗಳೇ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. 
ಡಾ.ಶಿವಕುಮಾರ ಸ್ವಾಮಿಗಳ ಆರೋಗ್ಯ ವಿಚಾರಿಸಿದ್ದಕ್ಕೆ ಕಿರಿಯ ಶ್ರೀಗಳು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 
ಮಠಕ್ಕೆ ಶೀಘ್ರವೇ ಭೇಟಿ ನೀಡುತ್ತೇನೆಂದು ಪ್ರಧಾನ ಮೋದಿಯವರು ಹೇಳಇದರು ಎಂದು ಮಠದ ಮೂಲಗಳು ಖಚಿತಪಡಿಸಿವೆ. 
SCROLL FOR NEXT