ಕಾರ್ಯಾಚರಣೆಯಲ್ಲಿ ತೊಡಗಿರುವ ಜೆಸಿಬಿ
ಬೆಂಗಳೂರು: ಕಳೆದ ಶನಿವಾರ ಸುರಿದ ಭಾರೀ ಮಳೆಗೆ ಕಾರ್ಮಿಕ ಶಾಂತಕುಮಾರ್ ಎಂಬುವರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದು ಅವರ ಶೋಧ ಕಾರ್ಯ ಸೋಮವಾರವೂ ಮುಂದುವರೆದಿದೆ.
ತಿಗಳರಪಾಳ್ಯದಲ್ಲಿನ ರಾಜಕಾಲುವೆಯಲ್ಲಿ ಶಾಂತಕುಮಾರ್ ಅವರು ಕೊಚ್ಚಿ ಹೋಗಿದ್ದು ವಿಪತ್ತು ಕ್ರಿಯಾ ತಂಡ, ಅಗ್ನಿಶಾಮಕ ದಳ, ಪೊಲೀಸರು ಮತ್ತು ನಗರ ಪಾಲಿಕೆ ರಕ್ಷಣಾ ತಂಡ ಹುಡುಕಾಟ ಮುಂದುವರೆಸಿದೆ.
ಶಾಂತಕುಮಾರ್ ಅವರು ಬಿಬಿಎಂಪಿ ಗುತ್ತಿಗೆದಾರ ಬಸವರಾಜ್ ಅವರ ಸೋದರಳಿಯ. ಕಾರ್ಮಿಕರಿಗೆ ಕೂಲಿ ನೀಡಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ನಾವು ಅವರು ಬಿದ್ದ ರಾಜಾ ಕಾಲುವೆ ಸಾಗುವ ದಾರಿಯಲ್ಲೆಲ್ಲ ಹುಡುಕಿದ್ದೇವೆ. ಆದರೂ ಅವರಾಗಲೀ ಅವರ ದೇಹವಾಗಲೀ ಪತ್ತೆಯಾಗಿಲ್ಲ. ಆದ್ದರಿಂದ ಇಂದು ಸಹ ಶೋಧ ಕಾರ್ಯ ಮುಂದುವರೆದಿದೆ ಎಂದು ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos