ರಾಜ್ಯ

ಬಿಜೆಪಿ ಕಾರ್ಯಕರ್ತರಿಂದ 'ಪರಿವರ್ತನಾ ರ್ಯಾಲಿ' ಯಾತ್ರಾ ವಾಹನದ ಮೇಲೆ ತೆಂಗಿನಕಾಯಿ ತೂರಾಟ

Manjula VN

ತುಮಕೂರು: ಪರಿವರ್ತನಾ ರ್ಯಾಲಿ ವೇಳೆ ಬಿಜೆಪಿಯ ಮತ್ತೊಂದು ಬಣದ ಕಾರ್ಯಕರ್ತರು ಯಾತ್ರಾ ವಾಹನದ ಮೇಲೆ ತೆಂಗಿನ ಕಾಯಿ ತೂರಾಟ ನಡೆಸಿದ ಘಟನೆ ತುರುವೇಕೆರೆ ತಾಲೂಕಿನ ಬಾಣಸಂದ್ರದಲ್ಲಿ ಶುಕ್ರವಾರ ನಡೆದಿದೆ. 

ಬಿಜೆಪಿಯ ಮತ್ತೊಂದು ಬಣ ಬಾಣಸಂದ್ರದಲ್ಲಿ ತಮ್ಮ ಕಾರ್ಯಕರ್ತರನ್ನು ಸಂಘಟಿಸಿ ಪರಿವರ್ತನಾ ರ್ಯಾಲಿ ಸ್ವಾಗತಕ್ಕೆ ಸಿದ್ಧತೆಗಳನ್ನು ನಡೆಸಿತ್ತು. ಇದರಂತೆ ಸಾರ್ವಜನಿಕ ಸಮಾರಂಭಕ್ಕೆ ವೇದಿಕೆಯನ್ನೂ ಹಾಕಿತ್ತು. ಆದರೆ, ಅದೇ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ಬಾಣಸಂದ್ರದಲ್ಲಿ ಸಭೆಗೆ ನಿಲ್ಲದ ಕಾರಣ ಸ್ಥಳದಲ್ಲಿ ಕೆಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. 

ಕೆಲ ಬಿಜೆಪಿ ಕಾರ್ಯಕರ್ತರು ಪರಿವರ್ತನಾ ರ್ಯಾಲಿ ವಾಹನಕ್ಕೆ ತೆಂಗಿನ ಕಾಯಿ ತೂರಾಟ ನಡೆಸಿದ್ದರು. ಇದರ ಪರಿಣಾಮ ರಥ ಮುಂಭಾಗದ ಗಾಜು ಛಿದ್ರಗೊಂಡಿತು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. 
SCROLL FOR NEXT