ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಆರ್.ಟಿ.ನಗರದಲ್ಲಿ ಹೊಟೇಲ್ ಮಾಲಿಕರ ಮೇಲೆ ಪೊಲೀಸರ ಹಲ್ಲೆ, ವೈರಲ್ ಆದ ವಿಡಿಯೊ

ನಿಗದಿತ ಕಾಲಾವಧಿಗಿಂತ ಹೆಚ್ಚು ಸಮಯ ಹೊಟೇಲ್ ತೆರಿದಿದ್ದರಿಂದ ಆರ್ ಟಿ ನಗರದ ದಿನ್ನೂರು...

ಬೆಂಗಳೂರು: ನಿಗದಿತ ಕಾಲಾವಧಿಗಿಂತ ಹೆಚ್ಚು ಸಮಯ ಹೊಟೇಲ್ ತೆರಿದಿದ್ದರಿಂದ ಆರ್ ಟಿ ನಗರದ ದಿನ್ನೂರು ಮುಖ್ಯ ರಸ್ತೆಯಲ್ಲಿ ಹೊಟೇಲ್ ನ ಮಾಲಿಕ ಮತ್ತು ಗ್ರಾಹಕರ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಕಾನ್ಸ್ಟೇಬಲ್ ಹಲ್ಲೆ ನಡೆಸಿರುವ ಘಟನೆ ನಿನ್ನೆ ನಡೆದಿದೆ. ಅದು ವಿಡಿಯೊದಲ್ಲಿ ದಾಖಲಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಲವು ಸುದ್ದಿ ವಾಹಿನಿಗಳಲ್ಲಿ ಕೂಡ ಪ್ರಸಾರವಾಗಿದೆ.
ಹೊಟೇಲ್ ನ ಮಾಲಿಕರು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಕೇಸು ದಾಖಲಿಸಿದ್ದಾರೆ. ಜೆ.ಸಿ, ನಗರ ಉಪ ವಿಭಾಗದ ಎಸಿಪಿ ಮಂಜುನಾಥ್ ಬಾಬು ಕಾನ್ಸ್ಟೇಬಲ್ ಜೊತೆ ಶೆಟ್ಟಿ ಲಂಚ್ ಹೋಮ್ ಎಂಬ ಹೊಟೇಲ್ ನ ಮಾಲಿಕ ರಾಜೀವ್ ಶೆಟ್ಟಿ ಅವರಿಗೆ ನೊಟೀಸ್ ಜಾರಿ ಮಾಡಿದ್ದರು. ಆದರೆ ಶೆಟ್ಟಿ ನೊಟೀಸ್ ಗೆ ಬೆಲೆ ನೀಡದೆ ಮಧ್ಯರಾತ್ರಿಯವರೆಗೂ ಹೊಟೇಲನ್ನು ತೆರೆದಿದ್ದರು.
ಇದರಿಂದ ಆಕ್ರೋಶಗೊಂಡ ಪೊಲೀಸ್ ಅಧಿಕಾರಿ ನಿನ್ನೆ ರಾತ್ರಿ ಹೊಟೇಲ್ ಗೆ ಹೋಗಿ ಶೆಟ್ಟಿ ಮೇಲೆ ಹಲ್ಲೆ ನಡೆಸಿದರು. ಕಾನ್ಸ್ಟೇಬಲ್ ಇಬ್ಬರು ಗ್ರಾಹಕರಿಗೂ ಹೊಡೆದಿದ್ದಾರೆ. ಈ ಇಡೀ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾನ್ಸ್ಟೇಬಲ್ ಕ್ಯಾಮರಾ ನೋಡಿದಾಗ ಕೋಣೆಯ ಬೆಳಕನ್ನು ಸ್ವಿಚ್ ಆಫ್ ಮಾಡಿದರು. ಈ ಪ್ರದೇಶದಲ್ಲಿ ರಾತ್ರಿ ಹೊತ್ತು ದರೋಡೆ ಅಥವಾ ಇನ್ನಿತರ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಯಿರುವುದರಿಂದ ಎಲ್ಲಾ ಹೊಟೇಲ್ ಗಳನ್ನು ತಡರಾತ್ರಿಯವರೆಗೆ ತೆರೆಯದಂತೆ ಇರಲು ಸೂಚನೆ ನೀಡಲಾಗಿತ್ತು. ಇದುವರೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT