ರಾಜ್ಯ

ಸಕಲೇಶಪುರ: ಕಂದಕಕ್ಕೆ ಉರುಳಿ ಬಿದ್ದ ಖಾಸಗಿ ಬಸ್, ಓರ್ವ ಸಾವು ಇನ್ನೊಬ್ಬರಿಗೆ ಗಾಯ

Raghavendra Adiga
ಸಕಲೇಶಪುರ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ ನ ಮಾರನಹಳ್ಳಿ ಎಂಬಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಬಸ್ ಒಂದು 25 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್ ಉರುಳಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇನ್ನೊಬ್ಬರೈಗೆ ತೀವ್ರ ಗಾಯಗಳಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಪ್ರಗತಿ ಟ್ರಾವೆಲ್ಸ್‌ ಗೆ ಸೇರಿದ್ದ ಬಸ್ ಇಂದು ಬೆಳಗ್ಗೆ 4.30ರ ವೇಳೆಗೆ ಕಂದಕಕ್ಕೆ ಉರುಳಿದೆ. ಎದುರಿನಿಂದ ಬರುತ್ತಿದ್ದ ಕಾರ್ ಒಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಈ ಅವಘಡ ಸಂಬವಿಸಿದೆ.
ಘಟನೆಯಲ್ಲಿ ಮಂಜೇಶ್ವರ ಗ್ರಾಮ ನಿವಾಸಿ ಜಗದೀಶ್‌ ಪೂಜಾರಿ (50) ಎನ್ನುವವರು ಮೃತಪಟ್ಟಿದ್ದಾರೆ. ದಾವಣಗೆರೆಯ ಅರ್ಜುನ್‌ ಎನ್ನುವವರಿಗೆ ಗಂಭೀರ ಸ್ವರೂಪದ ಗಾಯಗಳಗಿದ್ದು ಅವರನ್ನು ಹಾಸನದ ಎನ್‌ಡಿಆರ್‌ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ.
30 ಜನ ಪ್ರಯಾಣಿಕರಿದ್ದ ಬಸ್ ಅವಘಡ ನಡೆದ ಬಳಿಕ ಬಸ್ ನ ತುರ್ತು ಬಾಗಿಲು ಮೂಲಕ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು
SCROLL FOR NEXT