ಸಾಂದರ್ಭಿಕ ಚಿತ್ರ 
ರಾಜ್ಯ

ಮಕ್ಕಳ ಕಳ್ಳ ಸಾಗಣೆ: ರಾಜ್ಯದಲ್ಲಿ 1,680 ಪ್ರಕರಣಗಳು ದಾಖಲು, 5,577 ಮಂದಿ ಬಂಧನ

ಸಿಐಡಿಯ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಕರ್ನಾಟಕದಲ್ಲಿ 2011-17ರ ನಡುವೆ 1,680 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಸಂಬಂಧ 5,577 ಆರೋಪಿಗಳನ್ನು ಬಂಧಿಸಿದೆ.

ಬೆಂಗಳೂರು: ಸಿಐಡಿಯ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಕರ್ನಾಟಕದಲ್ಲಿ 2011-17ರ ನಡುವೆ 1,680 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಸಂಬಂಧ 5,577 ಆರೋಪಿಗಳನ್ನು ಬಂಧಿಸಿದೆ. ಸಿಐಡಿ ಪೋಲೀಸ್ ಅಧೀಕ್ಷಕಿ ಇಲಾಖಿ ಕರುಣಾಗರನ್ ಹೇಳಿದರು. ಮಕ್ಕಳ ಕಳ್ಳಸಾಗಣೆ ವಿರುದ್ಧ ಮಹಿಳಾ ದಕ್ಷತಾ ಸಮಿತಿಯವರು ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇದೇ ವೇಳೆ 820 ಮಂದಿ ಅಪ್ರಾಪ್ತ ವಯಸ್ಕರು ಸೇರಿದಂತೆ 4,041 ಸಂತ್ರಸ್ತರನ್ನು ಇಲಾಖೆಯು ರಕ್ಷಿಸಿದೆ ಎಂಡು ಅವರು ಹೇಳಿದ್ದಾರೆ. ಇದರ ಸಂಬಂಧ ಮಕ್ಕಳ ಹಕ್ಕುಗಳ ಕಾಯಿದೆ  ಬಾಲ್ಯ ವಿವಾಹ ನಿಷೇಧ ಕಾಯಿದೆ, ಲೈಂಗಿಕ ಅಪರಾಧಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣಗಳು ದಾಖಲಾಗಿವೆ, 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯಸ್ಥರಾದ ಉಮಾ ಮಹಾದೇವನ್ ಅವರು ಮಾತನಾಡಿ, ಓರ್ವ ಸರ್ಕಾರಿ ಅಧಿಕಾರಿಯಾಗಿ, ಅಗತ್ಯವಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು. ಇದೀಗ ಪತ್ತೆಯಾದ ಪ್ರಕರಣಗಳು ಕೇವಲ ಮೇಲ್ಪದರದವುಗಳಷ್ಟೆ.ಎಂದಉಮಾಅವರುತಮ್ಮಇಲಾಖೆಯಿಂದಮಹಿಳೆಯೊಬ್ಬರನ್ನುರಕ್ಷಿಸಿದ ಪ್ರಸಂಗವನ್ನು ಉದಾಹರಿಸಿ ಆಮಹಿಳೆಯ  ಜೀವನವು ಈಗ ಬದಲಾಗಿದೆ. ಆಕೆ ಸಂತಸವಾಗಿದ್ದಾರೆ ಎಂದರು.
ಉತ್ತರ ಪ್ರದೇಶದ ಸುಲ್ತಾನ್ ಪುರ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯನ್ನು ರಕ್ಷಿಸಿದ ಸಂಬಂಧ ಅವರು ಮಾತನಾಡಿದರು. ಆಕೆ ಮೂಲತಃ ವಿಜಯಪುರದವಳಾಗಿದ್ದು ಈಗ ಆಕೆ ಸಂತಸವಾಗಿದ್ದಾಳೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!