ಸಂಗ್ರಹ ಚಿತ್ರ 
ರಾಜ್ಯ

ವಂಚನೆ ಪ್ರಕರಣ: ಫ್ಲಿಪ್'ಕಾರ್ಟ್ ಸ್ಥಾಪಕರ ವಿರುದ್ದ ಪ್ರಕರಣ ದಾಖಲು

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ-ಕಾಮರ್ಸ್'ನ ದಿಗ್ಗಜ ಎಂದೇ ಕರೆಸಿಕೊಳ್ಳುವ ಫ್ಲಿಪ್ ಕಾರ್ಟ್ ಸ್ಥಾಪಕರ ವಿರುದ್ದ ಸೋಮವಾರ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ...

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ-ಕಾಮರ್ಸ್'ನ ದಿಗ್ಗಜ ಎಂದೇ ಕರೆಸಿಕೊಳ್ಳುವ ಫ್ಲಿಪ್ ಕಾರ್ಟ್ ಸ್ಥಾಪಕರ ವಿರುದ್ದ ಸೋಮವಾರ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. 
ಫ್ಲಿಪ್ ಕಾರ್ಟ್ ಸ್ಥಾಪಕರು ಹಾಗೂ ನಿರ್ವಹಣಾ ಸಿಬ್ಬಂದಿ ವಿರುದ್ಧ ಇಂದಿರಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಇಂದಿರಾ ನಗರದಲ್ಲಿ ಸಿ ಸ್ಟೋರ್ ನಡೆಸುತ್ತಿರುವ ನವೀನ್ ಕುಮಾರ್ ಎಂಬುವವರು ಫ್ಲಿಪ್ ಕಾರ್ಟ್ ಸ್ಥಾಪಕರಾದ ಸಚಿನ್ ಹಾಗೂ ಬಿನ್ನಿ ಬನ್ಸಾಲ್ ವಿರುದ್ಧ ದೂರು ದಾಖಲಿಸಿದ್ದಾರೆಂದು ವರದಿಗಳು ತಿಳಿಸಿವೆ. 
2015 ಜೂನ್ ಮತ್ತು 2016ರಲ್ಲಿ ಫ್ಲಿಪ್ ಕಾರ್ಟ್ ನಡುವೆ ಒಪ್ಪಂದವಾಗಿದ್ದು, ಕಂಪನಿಯ ಬಳಿ ಫ್ಲಿಪ್ ಕಾರ್ಡ್ 14,000 ಲ್ಯಾಪ್ ಟಾಪ್ ಗಳನ್ನು ಪೂರೈಕೆ ಮಾಡುವಂತೆ ತಿಳಿಸಿದೆ. ಇದರಂತೆ ಲ್ಯಾಪ್ ಟಾಪ್ ಗಳನ್ನು ಫ್ಲಿಪ್ ಕಾರ್ಟ್ ಗೆ ನೀಡಲಾಗಿತ್ತು. ಆದರೆ, ಫ್ಲಿಪ್ ಕಾರ್ಟ್ 1,480 ರಿಟರ್ನ್ಡ್ ವಸ್ತುಗಳಿಗೆ ಮಾತ್ರ ಹಣವನ್ನು ನೀಡಿದೆ. ಇತರೆ ಲ್ಯಾಪ್ ಟಾಪ್ ಗಳು ಹಾಗೂ ಅದರ ಶಿಪ್ಪಿಂಗ್, ಟಿಡಿಎಸ್ ಶುಲ್ಕಗಳನ್ನು ನೀಡಿಲ್ಲ. ಹಣವನ್ನು ನೀಡದೆ ಫ್ಲಿಪ್ ಕಾರ್ಟ್ ವಂಚಿಸಿದೆ ಎಂದು ನವೀನ್ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ದಾಖಲೆಗಳನ್ನು ನೀಡುವಂತೆ ತಿಳಿಸಲಾಗಿದೆ. ದಾಖಲೆಗಳು ನೀಡಿದ ಬಳಿಕ ಫ್ಲಿಪ್ ಕಾರ್ಟ್'ಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT