ಸಾಂದರ್ಭಿಕ ಚಿತ್ರ 
ರಾಜ್ಯ

ವಿಡಿಯೋ ಗೇಮ್ ಗೀಳು: ಸಾಲ ತೀರಿಸಲು ಹತ್ಯೆ, ಜೈಲು ಪಾಲಾದ ಯುವಕ

ವಿಡಿಯೋ ಗೇಮ್ ಗೀಳಿನಿಂದಾಗಿ ಮಾಡಿದ್ದ ಸಾಲವನ್ನು ತೀರಿಸಲು ಹತ್ಯೆ ಮಾಡಿದ್ದ ಯುವಕನೊಬ್ಬ ಇದೀಗ ಜೈಲು ಪಾಲಾಗಿದ್ದಾನೆ...

ಬೆಂಗಳೂರು: ವಿಡಿಯೋ ಗೇಮ್ ಗೀಳಿನಿಂದಾಗಿ ಮಾಡಿದ್ದ ಸಾಲವನ್ನು ತೀರಿಸಲು ಹತ್ಯೆ ಮಾಡಿದ್ದ ಯುವಕನೊಬ್ಬ ಇದೀಗ ಜೈಲು ಪಾಲಾಗಿದ್ದಾನೆ. 
31 ವರ್ಷದ ಮಹೇಶ್.ಎಸ್ ಜೈಲು ಪಾಲಾದ ಯುವಕನಾಗಿದ್ದಾನೆ. ಈತ ಬನಶಂಕರಿ 2ನೇ ಹಂತದ ನಿವಾಸಿಯಾಗಿದ್ದಾನೆ. ವಿಡಿಯೋ ಗೇಮ್ ಪಾರ್ಲರ್ ಮಾಲೀಕರಿಗೆ ರೂ.30 ಸಾವಿರ ಹಣ ನೀಡುವ ಸಲುವಾಗಿ ಮಹೇಶ್ 6 ವರ್ಷಗಳ ಹಿಂದಷ್ಟೇ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದ. ಇದೀಗ ಪ್ರಕರಣ ಸಂಬಂಧ ಮಹೇಶ್'ಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ ರೂ.10,000 ದಂಡವನ್ನು ವಿಧಿಸಿದೆ ಎಂದು ತಿಳಿದುಬಂದಿದೆ. 
ಎಸ್ಎಸ್ಎಲ್'ಸಿ ಮಾಡಿದ್ದ ಮಹೇಶ್ ನಂತರ ವಿದ್ಯಾಭ್ಯಾಸ ಮುಂದುವರೆಸಿರಲಿಲ್ಲ. ಕೆಲಸವಿಲ್ಲದೆ ಕುಳಿತಿದ್ದ ಮಹೇಶ್'ಗೆ ಪೋಷಕರು ಟಾಟಾ ಇಂಡಿಕಾ ಕಾರನ್ನು ನೀಡಿದ್ದಾರೆ. ಬಳಿಕ ಮಹೇಳ್ ಕಾರನ್ನು ಎನ್.ಆರ್.ಕಾಲೋನಿಯಲ್ಲಿದ್ದ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಜೊತೆಗೆ ಸೇರ್ಪಡೆಗೊಳಿಸಿದ್ದಾರೆ. ಬಳಿಕ ಕಾರಿನಿಂದ ಬರುತ್ತಿದ್ದ ಹಣವನ್ನು ಸಿಗರೇಟ್, ಮದ್ಯಪಾನ ಹಾಗೂ ವಿಡಿಯೋ ಗೇಮ್ ಆಡುವುದಕ್ಕೆ ಖರ್ಚು ಮಾಡುತ್ತಿದ್ದ. 
ಬನಶಂಕರಿಯ ಬಿಡಿಎ ಕಾಂಪ್ಲೆಸ್ ಹಾಗೂ ಬಸವೇಶ್ವರ ನಗದಲ್ಲಿರುವ ವಿಡಿಯೋ ಗೇಮ್ ಪಾರ್ಲರ್ ಗಳಿಗೆ ಹೋಗುತ್ತಿದ್ದ ಮಹೇಶ್ ಪ್ರತೀನಿತ್ಯ ಗೇಮ್ ಗಳನ್ನು ಆಡುತ್ತಿದ್ದ. ಹೀಗೆ ಅಂಗಡಿ ಮಾಲೀಕರ ಬಳಿ ಸಾವಿರಗಟ್ಟಲೆ ಸಾಲ ಮಾಡಿಕೊಂಡಿದ್ದ. ಬಳಿಕ ಸಾಲವನ್ನು ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ. 
ಮಹೇಳ್ ನೆರೆಮನೆಯಲ್ಲಿರುವ ವಿಶಾಲಾಕ್ಷಮ್ಮ ಎಂಬುವವರು ತಮ್ಮ ಮಕ್ಕಳಿಗೆ ಫೋನ್ ಮಾಡಲು ಆಗಾಗ ಮಹೇಶ್ ನನ್ನು ಕರೆಯುತ್ತಿದ್ದರು. 2011ರ ಮಾರ್ಚ್ 7 ರಂದು ವಿಶಾಲಾಕ್ಷಮ್ಮ ಅವರು ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಗೆ ಬಂದಿರುವ ಮಹೇಶ್ ಟೀ ಬೇಕೆಂದು ಕೇಳಿದ್ದಾನೆ. ಈ ವೇಳೆ ವಿಶಾಲಾಕ್ಷಮ್ಮ ಅವರು ಅಡುಗೆ ಮನೆಗೆ ಹೋದಾಗ ದಾರವನ್ನು ಕುತ್ತಿಗೆಗೆ ಸುತ್ತಿ ಹತ್ಯೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ರೂ.1 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಬಳಿಕ ವಿಡಿಯೋ ಗೇಮ್ ಪಾರ್ಲರ್ ಅವರಿಗೆ ನೀಡಬೇಕಿದ್ದ ಸಾಲದ ಹಣವನ್ನು ನೀಡಿ ಆಡುಗೋಡಿಯಲ್ಲಿರುವ ತನ್ನ ಸ್ನೇಹಿತರ ಮನೆಗೆ ಪರಾರಿಯಾಗಿದ್ದಾನೆ. ಬಳಿಕ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದ ಬನಶಂಕರಿ ಪೊಲೀಸರು ಘಟನೆ ನಡೆದ 7 ದಿನಗಳ ಬಳಿಕ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT