ಹುಬ್ಬಳ್ಳಿ: ಸಂಪ್ರದಾಯದ ಹೆಸರಲ್ಲಿ ನಡೆಯುವ ಹಲವು ಆಚರಣೆಗಳು ಅಮಾವೀಯತೆಯಿಂದ ಕೂಡಿವೆ. ಹುಬ್ಬಳ್ಳಿ ಸಮೀಪದ ಧಾರವಾಡದ ಕುಂದಗೋಳದಲ್ಲಿ ಬಿಸಿ ಬಿಸಿ ಕೆಂಡದ ಮೇಲೆ ಬಾಳೆ ಎಲೆಯ ಮೇಲೆ ಮಗುವನ್ನು ಮಲಗಿಸಿ ಹರಕೆ ತೀರಿಸಲಾಯಿತು.
ಪೋಷಕರು ತಾವು ಮಾಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ಹರಕೆ ಪೂರೈಸುತ್ತಾರೆ. ರಾಜ್ಯದ ಹಲವು ಭಾಗಗಳಿಂದ ಬಂದ ಜನರು ಈ ಹರಕೆ ತೀರಿಸಿದರು.
ಇದೇ ಮೊದಲ ಬಾರಿಗೆ ಈ ಆಚರಣೆ ನಡೆಯುತ್ತಿಲ್ಲ, ದೇವರ ಹೆಸರಿನಲ್ಲಿ ಹಲವು ಕಡೆ ಇಂಥ ಅನಿಷ್ಠ ಪದ್ಧತಿಗಳು ಇನ್ನೂ ಮುಂದುವರಿದಿವೆ. ಆದರೆ ಈ ಹರಕೆ ಪೂರೈಸುವಾಗ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸುವ ಅಗತ್ಯವಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಟ್ಟಡದ ಮೇಲಿಂದ ನಿಂತು ಸುಮಾರು 15 ಮೀಟರ್ ಎತ್ತರದಿಂದ ಮಕ್ಕಳನ್ನು ಮೇಲಿಂದ ಎಸೆಯಲಾಗುತ್ತದೆ, ಕೆಳಗೆ ನಿಂತವರು ಬೆಡ್ ಶೀಟ್ ಹಿಡಿದು ಮಕ್ಕಳನ್ನು ಹಿಡಿದುಕೊಳ್ಳುವ ಪದ್ಧತಿ ಇನ್ನೂ ಇದೆ.
ಇತ್ತೀಚೆಗೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಹಲವು ಹೆಣ್ಣುಮಕ್ಕಳನ್ನು ದೇವರ ಹೆಸರಲ್ಲಿ ಅರೆ ಬೆತ್ತಲೆಯಾಗಿ ಅಲಂಕರಿಸಿ ಮೆರವಣಿಗೆ ಮಾಡಿದ ಸಂಬಂಧ ವರದಿಯಾಗಿತ್ತು.
ಮದುರೈನ ವೆಲ್ಲೂರ್ ಗ್ರಾಮದ ಯೆಳೈಕಾಥ ಅಮ್ಮನ್ ದೇವಸ್ಥಾನದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ನಲ್ಲಿ ಬಾಲಕಿಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಈ ಬಾಲಕಿಯರನ್ನು ಅರೆನಗ್ನವಾಗಿ ಕೂಡಿಹಾಕಲಾಗುತ್ತದೆ. ಸೊಂಟಕ್ಕೆ ಮಾತ್ರ ರೇಶ್ಮೆ ಬಟ್ಟೆಯೊಂದನ್ನು ಸುತ್ತಲಾಗುತ್ತದೆ. ಬಾಲಕಿಯರಿಗೆ ಆಭರಣಗಳನ್ನು ತೊಡಿಸಿ ಅರೆನಗ್ನವಾಗಿ ನೂರಾರು ಜನ ಸೇರಿರುವ ಬೀದಿಯಲ್ಲಿ ಮೆರವಣಿಗೆ ಮಾಡಿಸಲಾಗುತ್ತದೆ. ಬಾಲಕಿಯರನ್ನು ‘ಅಮ್ಮನ್ ದೇವಿ’ಗೆ ನೀಡುವ ಪದ್ಧತಿ ಇದು ಎಂಬುದು ಅವರ ಪಾಲಕರ ನಂಬಿಕೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos