ಸಾಂದರ್ಭಿಕ ಚಿತ್ರ 
ರಾಜ್ಯ

ಹುಬ್ಬಳ್ಳಿ: ಮೊಹರಂ ಅಂಗವಾಗಿ ಶಿಶುಗಳನ್ನು ಕೆಂಡದ ಮೇಲೆ ಮಲಗಿಸಿ ಹರಕೆ ಪೂರೈಸಿದ ಪೋಷಕರು!

ಸಂಪ್ರದಾಯದ ಹೆಸರಲ್ಲಿ ನಡೆಯುವ ಹಲವು ಆಚರಣೆಗಳು ಅಮಾವೀಯತೆಯಿಂದ ಕೂಡಿವೆ. ಹುಬ್ಬಳ್ಳಿ ಸಮೀಪದ ಧಾರವಾಡದ ಕುಂದಗೋಳದಲ್ಲಿ ಬಿಸಿ ...

ಹುಬ್ಬಳ್ಳಿ:  ಸಂಪ್ರದಾಯದ ಹೆಸರಲ್ಲಿ ನಡೆಯುವ ಹಲವು ಆಚರಣೆಗಳು ಅಮಾವೀಯತೆಯಿಂದ ಕೂಡಿವೆ. ಹುಬ್ಬಳ್ಳಿ ಸಮೀಪದ ಧಾರವಾಡದ ಕುಂದಗೋಳದಲ್ಲಿ  ಬಿಸಿ ಬಿಸಿ ಕೆಂಡದ ಮೇಲೆ ಬಾಳೆ ಎಲೆಯ ಮೇಲೆ ಮಗುವನ್ನು ಮಲಗಿಸಿ ಹರಕೆ ತೀರಿಸಲಾಯಿತು.
ಪೋಷಕರು ತಾವು ಮಾಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ಹರಕೆ ಪೂರೈಸುತ್ತಾರೆ. ರಾಜ್ಯದ ಹಲವು ಭಾಗಗಳಿಂದ ಬಂದ  ಜನರು ಈ ಹರಕೆ ತೀರಿಸಿದರು.
ಇದೇ ಮೊದಲ ಬಾರಿಗೆ ಈ ಆಚರಣೆ ನಡೆಯುತ್ತಿಲ್ಲ, ದೇವರ ಹೆಸರಿನಲ್ಲಿ ಹಲವು ಕಡೆ ಇಂಥ ಅನಿಷ್ಠ ಪದ್ಧತಿಗಳು ಇನ್ನೂ ಮುಂದುವರಿದಿವೆ. ಆದರೆ ಈ ಹರಕೆ ಪೂರೈಸುವಾಗ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸುವ ಅಗತ್ಯವಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ  ಕಟ್ಟಡದ ಮೇಲಿಂದ ನಿಂತು ಸುಮಾರು 15 ಮೀಟರ್ ಎತ್ತರದಿಂದ ಮಕ್ಕಳನ್ನು ಮೇಲಿಂದ ಎಸೆಯಲಾಗುತ್ತದೆ, ಕೆಳಗೆ ನಿಂತವರು ಬೆಡ್ ಶೀಟ್ ಹಿಡಿದು ಮಕ್ಕಳನ್ನು ಹಿಡಿದುಕೊಳ್ಳುವ ಪದ್ಧತಿ ಇನ್ನೂ ಇದೆ. 
ಇತ್ತೀಚೆಗೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಹಲವು ಹೆಣ್ಣುಮಕ್ಕಳನ್ನು ದೇವರ ಹೆಸರಲ್ಲಿ ಅರೆ ಬೆತ್ತಲೆಯಾಗಿ  ಅಲಂಕರಿಸಿ ಮೆರವಣಿಗೆ ಮಾಡಿದ ಸಂಬಂಧ ವರದಿಯಾಗಿತ್ತು. 
ಮದುರೈನ ವೆಲ್ಲೂರ್ ಗ್ರಾಮದ ಯೆಳೈಕಾಥ ಅಮ್ಮನ್ ದೇವಸ್ಥಾನದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ  ಬಾಲಕಿಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಈ ಬಾಲಕಿಯರನ್ನು ಅರೆನಗ್ನವಾಗಿ ಕೂಡಿಹಾಕಲಾಗುತ್ತದೆ. ಸೊಂಟಕ್ಕೆ ಮಾತ್ರ ರೇಶ್ಮೆ ಬಟ್ಟೆಯೊಂದನ್ನು ಸುತ್ತಲಾಗುತ್ತದೆ. ಬಾಲಕಿಯರಿಗೆ ಆಭರಣಗಳನ್ನು ತೊಡಿಸಿ ಅರೆನಗ್ನವಾಗಿ ನೂರಾರು ಜನ ಸೇರಿರುವ ಬೀದಿಯಲ್ಲಿ ಮೆರವಣಿಗೆ ಮಾಡಿಸಲಾಗುತ್ತದೆ. ಬಾಲಕಿಯರನ್ನು ‘ಅಮ್ಮನ್ ದೇವಿ’ಗೆ ನೀಡುವ ಪದ್ಧತಿ ಇದು ಎಂಬುದು ಅವರ ಪಾಲಕರ ನಂಬಿಕೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT