ರಾಜ್ಯ

ಮುರುಡೇಶ್ವರ: ಆಡಲು ತೆರಳಿದ ಇಬ್ಬರು ಬಾಲಕರು ಸಮುದ್ರ ಪಾಲು

Raghavendra Adiga
ಮುರುಡೇಶ್ವರ: ಮುರುಡೇಶ್ವರ ಸಮೀಪ ಸಣ್ಣಬಾವಿ ಸಮುದ್ರ ತೀರದಲ್ಲಿ ಆಡಲು ತೆರಳಿದ್ದ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.
ಸಮುದ್ರ ತೀರದಲ್ಲಿ ನಿನ್ನೆ ಕಾಣೆಯಾಗಿದ್ದ ಇಬ್ಬರು ಬಾಲಕರ ಮೃತದೇಹ ಇಂದು ಕಾಯ್ಕಿಣಿ ಸಮುದ್ರ ತೀರದಲ್ಲಿ ಪತ್ತೆಯಾಗಿವೆ.
ಮೃತರನ್ನು ಮುರುಡೇಶ್ವರದ ಸಣ್ಣಬಾವಿ ನಿವಾಸಿಗಳಾದ ಗಣೇಶ ನಾಯ್ಕ (12) ಮತ್ತು ವಿನಾಯಕ ನಾಯ್ಕ (14) ಎಂದು ಗುರುತಿಸಲಾಗಿದೆ. ಆದಲು ತೆರಳಿದ್ದಾಗ ನೀರಿನ ಸೆಳವಿನಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದ ಬಾಲಕರಿಗಾಗಿ ನಿನ್ನೆ ನಡೆಸಿದ್ದ ಶೋಧ ಕಾರ್ಯಾಚರಣೆ ವಿಫಲವಾಗಿತ್ತು.
SCROLL FOR NEXT