ಎಂಜಿ ರಸ್ತೆಯಲ್ಲಿ ಮತ್ಸ್ಯಕನ್ಯೆಯಾದ ನಟಿ ಸೋನುಗೌಡ (ಫೇಸ್ ಬುಕ್ ಚಿತ್ರ) 
ರಾಜ್ಯ

ಎಂಜಿ ರಸ್ತೆಯಲ್ಲಿ ಮತ್ಸ್ಯಕನ್ಯೆ..!: ರಸ್ತೆಗುಂಡಿ ಮುಚ್ಚಲು 'ಬಾದಲ್' ವಿಶಿಷ್ಟ ಅಭಿಯಾನ

ಸತತ ಮಳೆಯಿಂದಾಗಿ ರಸ್ತೆಗಳಲ್ಲಿ ಬಾಯಿತೆರೆದು ಅಪಾಯಕ್ಕೆ ಅಹ್ವಾನ ನೀಡಿ ನಿಂತಿರುವ ರಸ್ತೆಗುಂಡಿಗಳ ವಿರುದ್ಧ ಕಲಾವಿದ ಬಾದಲ್ ನಂಜುಂಡ ಸ್ವಾಮಿ ತಮ್ಮದೇ ಆದ ಶೈಲಿಯವ್ವಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು: ಸತತ ಮಳೆಯಿಂದಾಗಿ ರಸ್ತೆಗಳಲ್ಲಿ ಬಾಯಿತೆರೆದು ಅಪಾಯಕ್ಕೆ ಅಹ್ವಾನ ನೀಡಿ ನಿಂತಿರುವ ರಸ್ತೆಗುಂಡಿಗಳ ವಿರುದ್ಧ ಕಲಾವಿದ ಬಾದಲ್ ನಂಜುಂಡ ಸ್ವಾಮಿ ತಮ್ಮದೇ ಆದ ಶೈಲಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆ ಗುಂಡಿಗಳ ವಿರುದ್ದ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಲಾವಿದ ಬಾದಲ್ ನಂಜುಡಸ್ವಾಮಿ ಮತ್ಸ್ಯಕನ್ಯೆಯನ್ನು ಕರೆತಂದಿದ್ದರು. ಹೌದು ನಗರದ ಪ್ರತಿಷ್ಟಿತ ಎಂ.ಜಿ.ರಸ್ತೆಯಲ್ಲಿನ ಬೃಹತ್‌ ಗುಂಡಿಯನ್ನು ಕಲಾವಿದ ಬಾದಲ್‌  ನಂಜುಂಡಸ್ವಾಮಿ ಸ್ವಿಮ್ಮಿಂಗ್‌ ಪೂಲ್‌ ಮಾದರಿಯಲ್ಲಿ ಸಿದ್ದಪಡಿಸಿದ್ದರು. ವಿಶೇಷವೆಂದರೆ ಬಾದಲ್ ಅವರ ಈ ಕಾರ್ಯಕ್ಕೆ ನಟಿ ಸೋನುಗೌಡ ಕೂಡ ಸಾಥ್ ನೀಡಿದ್ದರು. ಬಾದಲ್ ಸೃಷ್ಟಿಸಿದ್ದ ರಸ್ತೆಗುಂಡಿಯ ಸ್ವಿಮ್ಮಿಂಗ್ ಪೂಲ್ ನಲ್ಲಿ ನಟಿ  ಸೋನುಗೌಡ ಮತ್ಸ್ಯಕನ್ಯೆಯ ರೀತಿಯ ವೇಷ ಧರಿಸಿ ಕುಳಿತು ಕ್ಯಾಮೆರಾಗಳಿಗೆ ಪೋಸ್ ನೀಡಿದರು.

ಈ ಬಗ್ಗೆ ನಟಿ ಸೋನುಗೌಡ ಅವರನ್ನು ಮಾಧ್ಯಮಗಳು ಮಾತಿಗೆಳೆದಾಗ "ನಟಿಯಾಗಿ ನನಗೂ ಸಾಮಾಜಿಕ ಜವಾಬ್ದಾರಿ ಇದೆ. ರಸ್ತೆ ಗುಂಡಿಗಳನ್ನು ಶೀಘ್ರ ಮುಚ್ಚಿ ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಳೆದರೆಡು ವಾರಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ದಿಢೀರ್ ರಸ್ತೆಗುಂಡಿಗಳು ಬಾಯಿತೆರೆದಿದ್ದು, ಈಗಾಗಲೇ ಈ ಅಪಾಯಕಾರಿ ರಸ್ತೆಗುಂಡಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಹಲವು ವಾಹನ  ಸವಾರರು ಬಿದ್ದು ಗಾಯಗೊಂಡಿದ್ದಾರೆ.  ಸಿಎಂ ಸಿದ್ದರಾಮಯ್ಯ ಅವರು 15 ದಿನಗಳೊಳಗೆ ರಸ್ತುಗುಂಡಿ ಮುಚ್ಚುವಂತೆ ಆದೇಶ ನೀಡಿದ್ದಾರೆಯಾದರೂ ಆ ಕಾರ್ಯಕ್ಕೆ ಇನ್ನೂ ಚುರುಕು ಮುಟ್ಟಿಲ್ಲ. ನಗರಗ ಪ್ರಮುಖ ರಸ್ತೆಗಳಲ್ಲಿರುವ  ಗುಂಡಿಗಳ ಪರಿಸ್ಥಿತಿ ಹಾಗೆಯೇ ಇವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT