ಪೊಲೀಸ್ ಅಧಿಕಾರಿಗಳೊಂದಿಗೆ ಪ್ರೇಮ್ ಕುಮಾರ್ (ಮಧ್ಯದಲ್ಲಿರುವವನು) 
ರಾಜ್ಯ

ಉಡುಪಿ: ನಾಪತ್ತೆಯಾಗಿದ್ದ ಬಾಲಕ ಮೂರು ವರ್ಷದ ನಂತರ ಫೇಸ್ ಬುಕ್ ಮೂಲಕ ಮುಂಬೈನಲ್ಲಿ ಪತ್ತೆ

ಕಾಣೆಯಾದ ಮೂರು ವರ್ಷಗಳ ನಂತರ ಬಾಲಕ ತನ್ನ ಮಲತಂದೆಯ ಜೊತೆ ಮತ್ತೆ ಸೇರಿದ್ದಾನೆ.....

ಉಡುಪಿ: ಕಾಣೆಯಾದ ಮೂರು ವರ್ಷಗಳ ನಂತರ ಬಾಲಕ ತನ್ನ ಮಲತಂದೆಯ ಜೊತೆ ಮತ್ತೆ ಸೇರಿದ್ದಾನೆ. 13 ವರ್ಷದ ಪ್ರೇಮ್ ಕಿರಣ್ ಮುಂಬೈಯ ಕಲ್ಬದೇವಿಯಲ್ಲಿ ವಾಸಿಸುತ್ತಿರುವುದು ಪತ್ತೆ ಹಚ್ಚಿದ ಉಡುಪಿ ಪೊಲೀಸರು ಅವನನ್ನು ಉಡುಪಿಯಲ್ಲಿರುವ ಮಲ ತಂದೆ ಶ್ರೀಧರ್ ಕೆ. ಅಮೀನ್ ಬಳಿಗೆ ಕರೆತಂದಿದ್ದಾರೆ.
2015ರ ಜನವರಿ 31ರಂದು ಶ್ರೀಧರ್ ಅಮೀನ್ ಪ್ರೇಮ್ ಕಿರಣ್ ಕಾಣೆಯಾದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜನವರಿ 20ರಂದು ಮಣಿಪಾಲ ಮೈದಾನದಲ್ಲಿ ಆಟವಾಡಲು ಹೋಗಿದ್ದ ತನ್ನ ಮಗನನ್ನು ಯಾರೊ ಅಪಹರಿಸಿದ್ದಾರೆ ಎಂದು ದೂರು ಕೊಟ್ಟಿದ್ದರು. ಪೊಲೀಸರು ಶಂಕಿತ ಅಪಹರಣ ಕೇಸು ಎಂದು ಐಪಿಸಿ ಸೆಕ್ಷನ್ 363ರಡಿಯಲ್ಲಿ ಕೇಸು ದಾಖಲಿಸಿದ್ದರು.
ಪ್ರೇಮ್ ಕಿರಣ್ ಮಣಿಪಾಲದ ಹುಡ್ಕೊ ಕಾಲನಿಯ ವಾಸಿಯಾಗಿದ್ದನು. ಮಾನವ ಕಳ್ಳ ಸಾಗಣೆ ವಿರೋಧ ಘಟಕದ ಅಧಿಕಾರಿಯಾಗಿರುವ ಜಿಲ್ಲಾ ಅಪರಾಧ ವಿಭಾಗದ ಅಧಿಕಾರಿ ರತ್ನಕುಮಾರ್ ಜಿ, ಬಾಲಕ ಫೇಸ್ ಬುಕ್ ನಲ್ಲಿ ಸಕ್ರಿಯನಾಗಿರುವುದನ್ನು ಪತ್ತೆಹಚ್ಚಿದ್ದರು.
ಕಲಿಕೆಯಲ್ಲಿ ಆಸಕ್ತಿ ಹೊಂದಿರದ ಪ್ರೇಮ್ ಕುಮಾರ್ ತನ್ನಷ್ಟಕ್ಕೆ ತಾನು ವಾಸಿಸಲು ಇಚ್ಛಿಸುತ್ತಿದ್ದನು. ಹೀಗಾಗಿ ಹಣ ಸಂಪಾದಿಸಲೆಂದು ಮುಂಬೈಗೆ ಹೋಗಿದ್ದನು. ಪ್ರೇಮ್ ಕುಮಾರ್ ಫೇಸ್ ಬುಕ್ ಖಾತೆಯಲ್ಲಿ ತನ್ನ ಫೋಟೋವನ್ನು ಅಪ್ ಲೋಡ್ ಮಾಡಿದ್ದನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದರು. ಈ ಸುಳಿವಿನ ಆಧಾರದ ಮೇಲೆ ಮಣಿಪಾಲ ಮತ್ತು ಬೆಂಗಳೂರು ಪೊಲೀಸರು ಒಟ್ಟಾಗಿ ಮುಂಬೈಯಲ್ಲಿದ್ದ ಹುಡುಗನನ್ನು ಹುಡುಕಲು ಹುಡುಕಾಟ ಆರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರು ಮಣಿಪಾಲಕ್ಕೆ ಕರೆತಂದರು. ತಮ್ಮನ್ನು ಯಾರೂ ಅಪಹರಿಸಿಲ್ಲ, ತಾವು ಯಾವುದೇ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಬಾಲಕ ಹೇಳಿಕೆ ನೀಡಿದ್ದಾನೆ. ಮುಂಬೈನಲ್ಲಿ ಕ್ಯಾಂಟೀನೊಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT