ಬೆಂಗಳೂರಿನಲ್ಲಿ ನಿನ್ನೆ ನಡೆದ ಹುತಾತ್ಮ ಪೊಲೀಸ್ ಸ್ಮರಣೆ ಕಾರ್ಯಕ್ರಮ 
ರಾಜ್ಯ

ಹುತಾತ್ಮ ಪೊಲೀಸ್ ಸ್ಮಾರಕ ನಿರ್ಮಾಣ, ಪೊಲೀಸ್ ಸಿಬ್ಬಂದಿ ವೇತನ ಏರಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಹುತಾತ್ಮ ಪೊಲೀಸ್ ಸಿಬ್ಬಂದಿಯ ಸ್ಮಾರಕ ಮತ್ತು ಕ್ರೀಡಾಂಗಣವನ್ನು ಸ್ಥಾಪಿಸಲಾಗುವುದು ...

ಬೆಂಗಳೂರು: ಹುತಾತ್ಮ ಪೊಲೀಸ್ ಸಿಬ್ಬಂದಿಯ ಸ್ಮಾರಕ ಮತ್ತು ಕ್ರೀಡಾಂಗಣವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅವರು ನಿನ್ನೆ ಬೆಂಗಳೂರಿನಲ್ಲಿ ಪೊಲೀಸ್ ಹುತಾತ್ಮ ದಿನದ ಅಂಗವಾಗಿ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ 370 ಮಂದಿ ಪೊಲೀಸ್ ಸಿಬ್ಬಂದಿಯ ಕುಟುಂಬದವರನ್ನು ಸನ್ಮಾನಿಸಿ ಈ ವಿಷಯ ತಿಳಿಸಿದರು.
ಇದುವರೆಗೆ ರಾಜ್ಯದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಒಂದೇ ಒಂದು ಶಾಶ್ವತ ಸ್ಮಾರಕವಿಲ್ಲ. ಸಬ್ ಇನ್ಸ್ ಪೆಕ್ಟರ್ ಗಿಂತ ಮೇಲಿನ ರ್ಯಾಂಕಿನ ಪೊಲೀಸ್ ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡಲಾಗುವುದು. 2016 ಸೆಪ್ಟೆಂಬರ್ ನಿಂದ 2017 ಆಗಸ್ಟ್  ನಡುವೆ ಹುತಾತ್ಮರಾದ 320 ಪೊಲೀಸ್ ಸಿಬ್ಬಂದಿಯನ್ನು ನಿನ್ನೆ ಸನ್ಮಾನಿಸಲಾಯಿತು. ಅವರಲ್ಲಿ 12 ಮಂದಿ ಕರ್ನಾಟಕದವರಾಗಿದ್ದರು.
ಬೆಳಗಾವಿ ವಿಧಾನಸಭೆ ಕಲಾಪದ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕೊರತೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಇನ್ನು ಮುಂದೆ ಸೂಕ್ತ ಸೌಲಭ್ಯ ಒದಗಿಸಿಕೊಡಲಾಗುವುದು. ಅಪರಾಧಿಗಳು ಅಪರಾಧಗಳನ್ನು ಮಾಡಲು ತಂತ್ರಜ್ಞಾನವನ್ನು ಬಳಸುತ್ತಿರುವಾಗ ಪೊಲೀಸರು ಕೂಡ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಆದಷ್ಟು ಶೀಘ್ರವೇ ಕೇಸು ಇತ್ಯರ್ಥಪಡಿಸಬೇಕು ಎಂದರು.
ಮೈಸೂರು ಲೋಕಾಯುಕ್ತ ಎಸ್ ಪಿ ಎಸ್. ರವಿ ಕುಮಾರ್, ವಿಜಯಪುರ ಲೋಕಾಯುಕ್ತ ಎಸ್ ಪಿ ಎಂ.ಬಿ.ಪಾಟೀಲ್, ಡಿಸಿಆರ್ ಬಿ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಮಹೇಶ್ ಕುಮಾರ್, ಎಸ್ ಐ ರಾಮಚಂದ್ರ ಹುಚಪ್ಪ ಬಳ್ಳಾರಿ, ಎಎಸ್ಐ ಟಿ.ಡಿ.ರಮೇಶ್, ಸುರೇಶ್ ಎಸ್.ದೆಂಗಿ, ರಮೇಶ್ ದೆಂಗಿ, ಡಿ.ಎಸ್.ಕಿರಣ್ ಕುಮಾರ್ ಮತ್ತು ಎನ್.ಲಕ್ಷ್ಮಣ್ ಅವರಿಗೆ ಮುಖ್ಯಮಂತ್ರಿ ಸನ್ಮಾನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?

ಇಡೀ ದೇಹಕ್ಕೆ ಹರಡಿದ cancer, Joe Biden ಆರೋಗ್ಯ ಮತ್ತಷ್ಟು ಕ್ಷೀಣ; BBC ಸಂದರ್ಶನದಲ್ಲಿ ಪುತ್ರ ಹಂಟರ್ ಕಳವಳ

KBC ವೇದಿಕೆಯಲ್ಲಿ ಆಮಿರ್ ಖಾನ್‌; ‘4ನೇ ಮದುವೆ ಯಾವಾಗ?’; ಕಾಲೆಳೆದ ನೆಟ್ಟಿಗರು, Amitabh bachchan ಶೋ Promoಗೆ ಕಮೆಂಟ್‌ಗಳ ಮಹಾಪೂರ..!

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್, ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!