ಸಂಗ್ರಹ ಚಿತ್ರ 
ರಾಜ್ಯ

ಕರ್ನಾಟಕ: ಹಸಿವಿನಿಂದ 3 ಸಾವು ಕಂಡ ಕುಟುಂಬ ಆಧಾರ್ ಕಾರ್ಡ್ ಹೊಂದಿತ್ತು- ಯುಐಡಿಎಐ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತಾಲೂಕಿನಲ್ಲಿ ಹಸಿವಿನಿಂದ ಮೂವರು ಸಾವನ್ನಪ್ಪಿದ್ದ ಕುಟುಂಬ ಆಧಾರ್ ಕಾರ್ಡ್ ಹೊಂದಿತ್ತು ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆ ಯುಐಡಿಎಐ ಬುಧವಾರ ಸ್ಪಷ್ಟಪಡಿಸಿದೆ...

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತಾಲೂಕಿನಲ್ಲಿ ಹಸಿವಿನಿಂದ ಮೂವರು ಸಾವನ್ನಪ್ಪಿದ್ದ ಕುಟುಂಬ ಆಧಾರ್ ಕಾರ್ಡ್ ಹೊಂದಿತ್ತು ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆ ಯುಐಡಿಎಐ ಬುಧವಾರ ಸ್ಪಷ್ಟಪಡಿಸಿದೆ. 

ಗೋಕರ್ಣ ಹಸಿವಿನಿಂದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯುಐಡಿಎಐ ಅಧಿಕಾರಿಗಳು, ಘಟನೆ ಬಳಿಕ ಬೆಳೆಹಿತ್ತಲ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ನಾಗಮ್ಮ ಮುರು ಮುಕ್ರಿ ಹಾಗೂ ಮೃತಪಟ್ಟಿರುವ ಅವರ ಮೂವರು ಮಕ್ಕಳೂ ಆಧಾರ್ ಸಂಖ್ಯೆಗಳನ್ನು ಪಡೆದುಕೊಂಡಿರುವುದು ತಿಳಿದುಬಂದಿತ್ತು ಎಂದು ಹೇಳಿದ್ದಾರೆ. 

ಪರಿಶೀಲನೆ ವೇಳೆ ನಾಗಮ್ಮ ಅವರು ತಮ್ಮ ಪುತ್ರರಾದ ನಾರಾಯಣ ಮುಕ್ರಿ ಹಾಗೂ ವೆಂಕಟರಮಣ ಮುಕ್ರಿಯವರ ಆಧಾರ್ ಕಾರ್ಡ್ ಗಳನ್ನು ತೋರಿಸಿದ್ದಾರೆ. ಆದರೆ, ಸುಬ್ಬು ಮುಕ್ರಿಯವರ ಆಧಾರ್ ಕಾರ್ಡ್ ಮಾತ್ರಿ ಸಿಕ್ಕಿರಲಿಲ್ಲ. ನಾಗಮ್ಮ ಅವರು ಪುತ್ರರು ಹಸಿವಿನಿಂದ ಸಾವನ್ನಪ್ಪಿರಲಿಲ್ಲ. 

ನಾಗಮ್ಮ ಮುಕ್ರಿ ಹಾಗೂ ಅವರ ಮತ್ತೊಬ್ಬ ಪುತ್ರ ಅನಾರೋಗ್ಯಕ್ಕೀಡಾಗಿರುವ ಗಣಪತಿ ಮುಕ್ರಿ, ಗಣಪತಿ ಪತ್ನಿ ಹಾಗೂ ಮೂವರು ಮಕ್ಕಳನ್ನು ದೈಹಿಕ ಆರೋಗ್ಯವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT