ಹುಬ್ಬಳ್ಳಿ: ಕಳೆದ ಆಗಸ್ಟ್ 30ರಂದು ರಾತ್ರಿ ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶನಿವಾರ ಹುಬ್ಬಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆಗಸ್ಟ್ 30ರಂದು ರಾತ್ರಿ ಹಳೆಹುಬ್ಬಳ್ಳಿಯ ದುರ್ಗದ ಬಯಲಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಬಾಲಕಿಯ ಬಳಿಗೆ ಬಂದ ಆರೋಪಿಗಳಾದ ಮುತ್ತಪ್ಪ ವಾಲಿಕರ್ ಮತ್ತು ಸಂತೋಷ್ ವಾಲಿಕರ್ ತಮ್ಮ ಆಟೋದಲ್ಲಿ ಆಕೆ ಡ್ರಾಪ್ ಕೊಡುವುದಾಗಿ ಹೇಳಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿರುವ ಹಳೆ ಕಟ್ಟಡವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮಾರನೇ ದಿನ ಬೆಳಗ್ಗೆ ಬಾಲಕಿಯನ್ನು ಬೆಂಡಿಗೇರಿ ಬಳಿ ಇರುವ ಬಾಲ ಮಂದಿರದ ಬಳಿ ಬಿಟ್ಟು ಹೋಗಿದ್ದರು.
ಬಾಲ ಮಂದಿರದ ಒಳಗೆ ಹೋದ ಬಾಲಕಿ, ತಾನು ಅನಾಥೆಯಾಗಿದ್ದು, ಇಲ್ಲಿ ಉಳಿಯಲು ಅವಕಾಶ ನೀಡವಂತೆ ಕೇಳಿಕೊಂಡಿದ್ದಾಳೆ. ಆದರೆ ಬಾಲಕಿಯ ಸ್ಥಿತಿ ನೋಡಿ ಅನುಮಾನಗೊಂಡ ಬಾಲ ಮಂದಿರದ ಸಿಬ್ಬಂದಿ ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ ನಡೆದ ಘಟನೆಯನ್ನು ಬಾಲಕಿ ಸಿಬ್ಬಂದಿಗೆ ವಿವರಿಸಿದ ನಂತರ ಅವರು ಹಳೆಹುಬ್ಬಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಇಬ್ಬರು ಕಾಮುಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos