ವಿಜಯಪುರ: ಕಳೆದ ಎರಡು ದಿನಗಳಿಂದ ಸತತವಾಗಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದ ಪ್ರತ್ಯೇಕ ಘಟನೆಗಳಲ್ಲಿ, ಇಂಡಿ ತಾಲ್ಲೂಕಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಹಳಗುಣಕಿಯ ರಾಚಪ್ಪ ಗಣಪತಿ ಸುತಾರ, ಸಿದ್ದವ್ವ ರಾಚಪ್ಪ ಸುತಾರ, ಜೇವೂರಿನ ಕರಬಸಪ್ಪ ಪೀರಪ್ಪ ಆಕಳವಾಡಿ, ಇಂದ್ರಾಬಾಯಿ ಕರಬಸಪ್ಪ ಆಕಳವಾಡಿ ಮೃತ ದುರ್ದೈವಿಗಳು.
ಸತತ ಮಳೆಯಿಂದಾಗಿ ಗೋಡೆಗೆ ತೇವಾಂಶ ಹತ್ತಿತ್ತು. ಇದರ ಜತೆಗೆ ಎರಡು ದಿನ ಸುರಿದ ಮಳೆಗೆ ಗೋಡೆ ನೆನೆದು ಹೊರಭಾಗಕ್ಕೆ ಹೊಂದಿಕೊಂಡಂತಿದ್ದ ಶೆಡ್ ಕುಸಿದು ಬಿದ್ದಿದೆ. ಇದರ ಪರಿಣಾಮ ಒಳಭಾಗದಲ್ಲಿ ಮಲಗಿದ್ದ ದಂಪತಿ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಜಯಪುರ ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಭಾರಿ ಮಳೆಯಾಗಿದೆ.