ಬೆಂಗಳೂರು: ಬೆಂಗಳೂರಿನ ಕಲ್ಯಾಣಿ ಡೆವಲಪರ್ಸ್ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿ, ಬನ್ನೇರುಘಟ್ಟ, ಚೆನ್ನೈ, ಹೈದರಾಬಾದ್ ಸೇರಿದಂತೆ ಏಕಕಾಲದಲ್ಲಿ 15 ಕಡೆ ದಾಳಿ ನಡೆದಿರುವುದಾಗಿ ಮಾದ್ಯಮ ವರದಿ ತಿಳಿಸಿದೆ.
ಕಲ್ಯಾಣಿ ಡೆವಲಪರ್ಸ್ ಸಂಸ್ಥೆಗಳ ಮೇಲೆ ದಾಳಿ ನಡೆಸಿ ದಾಖಲೆ, ಲೆಕ್ಕಪತ್ರ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಕಲ್ಯಾಣಿ ಡೆವಲಪರ್ಸ್ ಎ ಮೋಹನ್ ರಾಜು ಎಂಬವರಿಗೆ ಸೇರಿದ ಕಂಪನಿಯಾಗಿದ್ದು, 1991ರಿಂದ ಕಾರ್ಯ ನಿರ್ವಹಿಸುತ್ತಿದೆ. ಕಲ್ಯಾಣಿ ಪ್ಲಾಟಿನಾ, ಕಲ್ಯಾಣಿ ವಿಸ್ತಾ, ಕೃಷ್ಣ ಮ್ಯಾಗ್ನಮ್, ಕಲ್ಯಾಣಿ ಟವರ್ಸ್ ಹಾಗೂ ರಿಂಗ್ ರೋಡ್ ನಲ್ಲಿರುವ ಕಲ್ಯಾಣಿ ಟೆಕ್ ಪಾರ್ಕ್ ಸೇರಿದಂತೆ ಅಪಾರ ಆಸ್ತಿಗಳು ಈ ಸಂಸ್ಥೆಯ ಒಡೆತನದಲ್ಲಿ ಇದೆ. ಕಲ್ಯಾಣಿ ಮೋಟರ್ಸ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಮೋಹನ್ ರಾಜು ನಿರ್ದೇಶಕರಾಗಿದ್ದಾರೆ.