ರಾಜ್ಯ

ಐಟಿ ಇಲಾಖೆ ಅಧಿಕಾರಿಗಳಿಗೆ ಲಂಚ ಕೊಡಲು ಯತ್ನಿಸಿದ ಐವರ ಬಂಧನ

Sumana Upadhyaya
ಬೆಂಗಳೂರು: ವಿವಿಧ ನಗರಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ವಕೀಲರು, ಚಾರ್ಟೆಡ್ ಅಕೌಂಟೆಂಟ್ ಸೇರಿದಂತೆ ದೆಹಲಿಯ ಐವರನ್ನು ಕೇಂದ್ರ ತನಿಖಾ ದಳದ ಬೆಂಗಳೂರು ವಿಭಾಗ ಇತ್ತೀಚೆಗೆ ಬಂಧಿಸಿದೆ. ಐಟಿ ಇಲಾಖೆ ಮುಂದೆ ಉಳಿದುಕೊಂಡಿದ್ದ ಪಾನ್ ಮಸಾಲಾ ಕಂಪೆನಿಗೆ ಸಂಬಂಧಿಸಿದ ಕೇಸುಗಳ ವಿಚಾರಣೆಯನ್ನು ಇತ್ಯರ್ಥಪಡಿಸುವುದಾಗಿದೆ.
ಕಳೆದ ಆಗಸ್ಟ್ 30ರಂದು ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಎಫ್ಐಆರ್ ನಲ್ಲಿ ವಕೀಲ ಸತೀಶ್ ಚಂದ್ ಶರ್ಮ, ಚಾರ್ಟೆಡ್ ಅಕೌಂಟೆಂಟ್ ಕೃಷ್ಣ ಚೌರಾಸಿಯಾ, ಉದ್ಯಮಿ ವಿನೋದ್ ಕುಮಾರ್ ಬಂಕ, ಸಂಜಯ್ ಕೊಹ್ಲಿ ಮತ್ತು ಅಭಿಷೇಕ್ ಅವರ ಹೆಸರುಗಳಿವೆ.
ಸಿಬಿಐ ಸಂಗ್ರಹಿಸಿದ ವಿಷಯಗಳಲ್ಲಿ ಆರೋಪಿ ಶರ್ಮಗೆ ಐಟಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವಿತ್ತು. ಚೌರಾಸಿಯಾ ಶಾಂತಿ ಪಾನ್ ಮಸಾಲಾ ಪ್ರೈ.ಲಿಮಿಟೆಡ್ ನ ವ್ಯವಸ್ಥಾಪಕರಾಗಿದ್ದು ಐಟಿ ಇಲಾಖೆಯ ಮುಂದೆ ಕೆಲವು ಕೇಸುಗಳು ದಾಖಲಾಗಿದ್ದವು. 
SCROLL FOR NEXT