ಚುನಾವಣಾ ಆಯೋಗ 
ರಾಜ್ಯ

ಕರ್ನಾಟಕ: ಭಿಕ್ಷುಕರಿಗೆ ಮತದಾನ ಭಾಗ್ಯ ನೀಡಲು ಚುನಾವಣಾ ಆಯೋಗಕ್ಕೆ ಡಿಎಎಆರ್ ಐ ಮನವಿ

ಕರ್ನಾಟಕದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಮತದಾರರೆಂದು ನೋಂದಣಿ ಮಾಡಬೇಕೆಂದು ಡೆಮಾಕ್ರೆಟಿಕ್ ಅಂಬಾಸಡರ್ ಫಾರ್ ಆಲ್ ಇಂಡಿಯಾ ರೂರಲ್ ಇಂಟಿಗ್ರಿಟಿ(ಡಿಎಎಆರ್ ಐ) ಚುನಾವಣಾ

ಮಂಗಳೂರು: ಕರ್ನಾಟಕದಲ್ಲಿ  ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಮತದಾರರೆಂದು ನೋಂದಣಿ ಮಾಡಬೇಕೆಂದು ಡೆಮಾಕ್ರೆಟಿಕ್ ಅಂಬಾಸಡರ್ ಫಾರ್ ಆಲ್ ಇಂಡಿಯಾ ರೂರಲ್ ಇಂಟಿಗ್ರಿಟಿ(ಡಿಎಎಆರ್ ಐ) ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಭಿಕ್ಷುಕರನ್ನೂ ಮತದಾರರನ್ನಾಗಿ ನೋಂದಣಿ ಮಾಡುವವರೆಗೆ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಬಾರದು ಎಂದು ಡಿಎಎಆರ್ ಐ ಆಯೋಗಕ್ಕೆ ಒತ್ತಡ ಹೇರಿದೆ.  ಡಿಎಎಆರ್ ಐ ಸಂಚಾಲಕ ರವಿ ಬಂಗೇರ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಗೆ ಪತ್ರ ಬರೆದಿದ್ದು, ರಾಜ್ಯದ ಶೇ.5 ರಷ್ಟು ಜನಸಂಖ್ಯೆ ಭಿಕ್ಷಾಟನೆಯಲ್ಲಿ ತೊಡಗಿದ್ದು, ಈ ಪೈಕಿ ಬಹುತೇಕರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಲ್ಲ. ಅಷ್ಟೇ ಅಲ್ಲದೇ ಅವರಿಗೆ ವಸತಿಯೂ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ. 
ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿರುವ ಪುನರ್ವಸತಿ ಕೇಂದ್ರಗಳಲ್ಲಿರುವ ಭಿಕ್ಷುಕರೂ ಸಹ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ, ಅವರಿಗೆ ಸರಿಯಾದ ವಿಳಾಸವೂ ಇಲ್ಲ ಎಂದು ಪತ್ರದಲ್ಲಿ ರವಿ ಬಂಗೇರ ತಿಳಿಸಿದ್ದು ಅವರು ಭಾರತದ ನಾಗರಿಕರಲ್ಲವೇ? ಅವರಿಗೆ ಮತದಾನ ಮಾಡುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 
ಈ ವಿಷಯವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಭಿಕ್ಷುಕರಿಗೆ ಸರಿಯಾದ ವಿಳಾಸವಿಲ್ಲವಾದ ಕಾರಣ ಗುರುತಿನ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ, ಭಿಕ್ಷಾಟನೆಯಲ್ಲಿ ತೊಡಗುವವರಿಗೆ ಮನೆ ಇದ್ದಿದ್ದರೆ ಅವರೇಕೆ ಆ ಕೆಲಸ ಮಾಡುತ್ತಿದ್ದರು ಎಂದು ಪತ್ರದಲ್ಲಿ ರವಿ ಬಂಗೇರ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT