ಸಾಂದರ್ಭಿಕ ಚಿತ್ರ 
ರಾಜ್ಯ

ದೇಶದಲ್ಲಿ ರಾಯಚೂರು, ಯಾದಗಿರಿ ಸೇರಿ 100 ಹಿಂದುಳಿದ ಜಿಲ್ಲೆಗಳು

ಪ್ರಧಾನಿ ನರೇಂದ್ರಮೋದಿ ಈ ವರ್ಷದ ಜನವರಿಯಲ್ಲಿ ಚಾಲನೆ ನೀಡಿದ್ದ ಮಹತ್ವಾಕಾಂಕ್ಷೆಯತ್ತ ಸಾಗುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ರಾಯಚೂರು ( 12 ) ಯಾದಗಿರಿ (40) ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದು, ಅತಿ ಹಿಂದುಳಿದ ಜಿಲ್ಲೆಗಳು ಎಂದು ಘೋಷಣೆಯಾಗಿವೆ.

ಬೆಂಗಳೂರು: ದೇಶದಲ್ಲಿನ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ  ಕರ್ನಾಟಕದ ರಾಯಚೂರು ( 12 ) ಯಾದಗಿರಿ (40) ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದು, ಅತಿ ಹಿಂದುಳಿದ ಜಿಲ್ಲೆಗಳು ಎಂದು ಘೋಷಿಸಲ್ಪಟ್ಟಿವೆ.

ಅಭಿವೃದ್ದಿ ಕಾರ್ಯಸೂಚಿಗಳಲ್ಲಿ ರಾಯಚೂರು ಶೇ. 43. 53 ರಷ್ಟು ಅಂಕ ಪಡೆದಿದ್ದರೆ, ಯಾದಗಿರಿ ಶೇ. 37. 1 ರಷ್ಟು ಅಂಕ ಪಡೆದಿದೆ . ಆರೋಗ್ಯ, ಪೌಷ್ಠಿಕಾಂಶ, ಶಿಕ್ಷಣ, ಕೃಷಿ, ಜಲ ಸಂಪನ್ಮೂಲ, ಮೂಲ ಸೌಕರ್ಯ, ಆರ್ಥಿಕ ಒಳ್ಳಗೊಳ್ಳುವಿಕೆ, ಮತ್ತು ಕೌಶಲ್ಯಾಭಿವೃದ್ಧಿ  ಕ್ಷೇತ್ರಗಳಲ್ಲಿನ 49  ಅಂಶಗಳ ಆಧಾರದ ಮೇಲೆ ನೀತಿ ಆಯೋಗ  ಜಿಲ್ಲೆಗಳ ಪ್ರಗತಿಯನ್ನು ನಿರ್ವಹಣೆ ಮಾಡುತ್ತದೆ.

ಏ. 1 ರಿಂದ ಜಿಲ್ಲೆಗಳು ಮಾಹಿತಿಯನ್ನು ಸಂಗ್ರಹಿಸಲು ಆರಂಭಿಸುತ್ತವೆ. ಕಾಲಕ್ಕೆ ತಕ್ಕಂತೆ ಪ್ರಗತಿಯಲ್ಲಿನ ಆಧಾರದ ಮೇಲೆ ಕ್ರಮಾಂಕವನ್ನು ನೀಡಲಾಗುತ್ತದೆ. ಮಕ್ಕಳ ಬೆಳವಣಿಗೆ, ಸಾಂಕ್ರಾಮಿಕ ರೋಗಗಳು, ಮತ್ತು ಆರೋಗ್ಯ ಮೂಲಸೌಕರ್ಯ ಮತ್ತಿತರ  ಆರೋಗ್ಯ ಮತ್ತು ಪೌಷ್ಠಿಕಾಂಶಕ್ಕೆ ಸಂಬಂಧಿಸಿದ ವಿಷಯಗಳೇ ಶೇ. 30 ರಷ್ಟು ಅಂಕಗಳನ್ನು ಹೊಂದಿರುತ್ತವೆ.

ನಾಲ್ಕು ವರ್ಷಗಳ ನಂತರ ಪ್ರಗತಿಯಾಗಿದೆ. ರಾಜ್ಯದಲ್ಲಿ ಶೇ. 72 ರಷ್ಟು ಶಿಕ್ಷಣಮಟ್ಟವಿದ್ದರೆ ಯಾದಗಿರಿಯಲ್ಲಿ ಶೇ. 51 ರಷ್ಟು ಶಿಕ್ಷಣಮಟ್ಟ ಹೆಚ್ಚಾಗಿದೆ.  ಪಂಜಾಬಿಗಿಂತಲೂ ಇಲ್ಲಿ ಹೆಚ್ಚು ಗುಣಮಟ್ಟದ ಅಕ್ಕಿಯನ್ನು ಉತ್ಪಾದಿಸಲಾಗುತ್ತಿದೆ ಎಂದು ಯಾದಗಿರಿಯ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT