ಸಾಂದರ್ಭಿಕ ಚಿತ್ರ 
ರಾಜ್ಯ

ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆ ತಾತ್ಕಾಲಿಕ ನಿಷೇಧ: ಬಂಗಡೆ ಮೀನಿನ ಬೆಲೆ ಏರಿಕೆ ಸಾಧ್ಯತೆ

ಜೂನ್ 14ರ ತನಕ ತಳಿಯನ್ನು ಬೆಳೆಸುವ ಉದ್ದೇಶದಿಂದ ಪೂರ್ವ ಕರಾವಳಿಯಲ್ಲಿ ...

ಮಂಗಳೂರು: ಜೂನ್ 14ರ ತನಕ ತಳಿಯನ್ನು ಬೆಳೆಸುವ ಉದ್ದೇಶದಿಂದ ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿರುವುದರಿಂದ ಇಲ್ಲಿನ ಸ್ಥಳೀಯ ಬಂಗಡೆ ಮೀನಿನ ಬೆಲೆ ಏರಿಕೆಯಾಗಲಿದೆ ಎಂದು ತಜ್ಞರು ಖಚಿತಪಡಿಸಿದ್ದಾರೆ.

ಕರಾವಳಿಯಲ್ಲಿ ಇದು ಮೀನುಗಾರಿಕೆಯ ಸಮಯವಾಗಿದ್ದು ಸ್ಥಳೀಯ ಮೀನುಗಾರಿಕೆ ನಿಷೇಧದಿಂದಾಗಿ ವಹಿವಾಟು ಇಳಿಮುಖವಾಗಿದೆ. ಮಂಗಳೂರಿನಲ್ಲಿ 3,173 ಮೀನುಗಾರಿಕೆ ದೋಣಿಗಳಲ್ಲಿ ಸುಮಾರು ಶೇಕಡಾ 50ರಷ್ಟನ್ನು ತೀರದಲ್ಲಿಡಲಾಗಿದೆ. ಇದಕ್ಕೆ ಸಮುದ್ರದಲ್ಲಿ ಮೀನುಗಳ ಕೊರತೆಯೇ ಕಾರಣವಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ಏಪ್ರಿಲ್-ಮೇ ತಿಂಗಳಲ್ಲಿ ಮೀನುಗಾರಿಕೆ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುಳ.

ಅಲ್ಲದೆ ಹಿಡಿದ ಮೀನುಗಳನ್ನು ಚೆನ್ನೈಗೆ ಕಳುಹಿಸಲಾಗುತ್ತದೆ. ನಿಷೇಧದ ಸಂದರ್ಭದಲ್ಲಿ ಚೆನ್ನೈಗೆ ಹೆಚ್ಚಿನ ಮೀನುಗಳು ಪೂರೈಕೆಯಾಗುವುದು ಕೊಚ್ಚಿ ಮತ್ತು ಮಂಗಳೂರುಗಳಿಂದ. ನಿಷೇಧದಿಂದಾಗಿ ಮಂಗಳೂರಿನಿಂದ ಚೆನೈಗೆ ಪೂರೈಕೆಯಾಗುವ ಮೀನುಗಳಲ್ಲಿ ಪ್ರತಿ ದಿನಕ್ಕೆ 60 ಟನ್ ಗಳಷ್ಟು ಕಡಿಮೆಯಾಗುತ್ತದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಮಹೇಶ್ ಕುಮಾರ್.

ಸಾಮಾನ್ಯವಾಗಿ ಬೆಂಗಳೂರಿಗೆ ಚೆನ್ನೈಯಿಂದ ಮೀನುಗಳು ಹೆಚ್ಚು ಪೂರೈಕೆಯಾಗುತ್ತವೆ. ಆದರೆ ಈ ಬಾರಿ ಚೆನ್ನೈಯಲ್ಲಿ ಮೀನುಗಳ ಕೊರತೆಯಿರುವುದರಿಂದ ಮಂಗಳೂರಿನಿಂದ ದಿನಕ್ಕೆ 30 ಟನ್ ಗಳಷ್ಟು ಮೀನುಗಳು ಪೂರೈಕೆಯಾಗಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT