ಸಾಂದರ್ಭಿಕ ಚಿತ್ರ 
ರಾಜ್ಯ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹುಲಿ ಪ್ರಾಧಿಕಾರದ ತಡೆ

ಪಶ್ಚಿಮ ಘಟ್ಟದ ಮೂರು ಆನೆ ಕಾರಿಡಾರ್ ಗಳನ್ನು ಒಳಗೊಂಡಿರುವ, ಹುಲಿ ಮತ್ತು ವನ್ಯಮೃಗ ....

ಬೆಂಗಳೂರು: ಪಶ್ಚಿಮ ಘಟ್ಟದ ಮೂರು ಆನೆ ಕಾರಿಡಾರ್ ಗಳನ್ನು ಒಳಗೊಂಡಿರುವ, ಹುಲಿ ಮತ್ತು ವನ್ಯಮೃಗ ಅಭಯಾರಣ್ಯಗಳನ್ನು ಒಳಗೊಂಡ ದಟ್ಟ ಅರಣ್ಯದ ಮೂಲಕ ಹಾದುಹೋಗುವ ಹುಬ್ಬಳ್ಳಿ-ಅಂಕೊಲಾವರೆಗೆ ಉದ್ದೇಶಿತ 168.28 ಕಿಲೋ ಮೀಟರ್ ಉದ್ದದ ಬ್ರಾಡ್ ಗೇಜ್ ರೈಲು ಮಾರ್ಗವನ್ನು ರಾಷ್ಟ್ರೀಯ ಹುಲಿ ಅಭಯಾರಣ್ಯ ಪ್ರಾಧಿಕಾರ ತಿರಸ್ಕರಿಸಿದೆ.

ಇದು ಜೀವವೈವಿಧ್ಯದ ತಾಣ ಮಾತ್ರವಲ್ಲದೆ ವಿಶ್ವಪರಂಪರೆಯ ನೆಲೆಯಾಗಿದೆ ಮತ್ತು ಯೋಜನೆ ಜಾರಿಗೆ ಬಂದರೆ ಆನೆಗಳ ಹಳೆಯ ವಲಸೆ ತಾಣವನ್ನು ತುಂಡು ಮಾಡುವುದಲ್ಲದೆ ಹುಲಿ ಅಭಯಾರಣ್ಯದ ಆವಾಸಸ್ಥಾನ ಸಂಪರ್ಕವನ್ನು ಮುರಿಯುತ್ತದೆ.

ಕಳೆದ ಜುಲೈಯಲ್ಲಿ ಪರಿಸರ, ಅರಣ್ಯ ಸಚಿವಾಲಯದ ಸ್ಥಳೀಯ ಸಶಕ್ತೀಕರಣ ಸಮಿತಿ ಯೋಜನೆಗೆ ಮೊದಲನೇ ಹಂತದ ಅನುಮೋದನೆಯನ್ನು ಶಿಫಾರಸು ಮಾಡಿತ್ತು. ಆದರೆ ಅದು ವಿವಿಧ ಷರತ್ತುಗಳೊಂದಿಗೆ. ಪ್ರಾದೇಶಿಕ ಅಧಿಕಾರ ಸಮಿತಿ ರೈಲ್ವೆ ಸಚಿವಾಲಯಕ್ಕೆ ಇನ್ನೂ ಹೆಚ್ಚಿನ ಸುರಂಗಮಾರ್ಗಗಳನ್ನು ಕೇಳಿತ್ತು. ರೈಲ್ವೆ ಸಚಿವಾಲಯ ಸಲ್ಲಿಸಿರುವ ಹೊಸ ಪ್ರಸ್ತಾವನೆಗಳಲ್ಲಿ 34 ಸುರಂಗಗಳು ಮತ್ತು 9 ರೈಲ್ವೆ ನಿಲ್ದಾಣಗಳು ಬೇಕಾಗಿದ್ದು ಆದರೆ ಹೆಚ್ಚಿನ ಅರಣ್ಯ ಪ್ರದೇಶಗಳ ಅವಶ್ಯಕತೆಯಿದೆ ಎಂದು ಹೇಳಿದೆ.

ವನ್ಯಜೀವಿಗಳಿಗೆ ಸುರಂಗಮಾರ್ಗಗಳ ನಿರ್ಮಾಣ ಸೇರಿದಂತೆ ತಗ್ಗಿಸುವ ಕ್ರಮಗಳನ್ನು ಪುನರ್ ಪರಿಶೀಲಿಸಲು ಪ್ರಾದೇಶಿಕ ಅಧಿಕಾರ ಸಮಿತಿ ಹೇಳಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಹರ್ಷ ವರ್ಧನ ರಾಷ್ಟ್ರೀಯ ವನ್ಯಮೃಗ ಮಂಡಳಿಯ 48ನೇ ಸ್ಥಾಯಿ ಸಮಿತಿ ಸಭೆಯಲ್ಲಿ, ರಾಷ್ಟ್ರೀಯ ಹುಲಿ ಮೀಸಲು ಪ್ರಾಧಿಕಾರದ ಸ್ಥಳ ತಪಾಸಣೆಯಲ್ಲಿ ಯೋಜನೆಯನ್ನು ಶಿಫಾರಸು ಮಾಡದೆ ತಿರಸ್ಕರಿಸಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT