ಸಂಗ್ರಹ ಚಿತ್ರ 
ರಾಜ್ಯ

ಶೂನ್ಯ ಫಲಿತಾಂಶ; 10 ಕಾಲೇಜುಗಳ ಮಾನ್ಯತೆ ರದ್ದು

ಸತತ ಮೂರು ವರ್ಷಗಳಿಂದ ಶೂನ್ಯ ಫಲಿತಾಂಶ ಪಡೆದ 10 ಖಾಸಗಿ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಮಾನ್ಯತೆಯನ್ನು 2018-19ನೇ ಶೈಕ್ಷಣಿಕ ಸಾಲಿನಿಂದ ಅನ್ವಯಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹಿಂಪಡೆದಿದೆ...

ಬೆಂಗಳೂರು: ಸತತ ಮೂರು ವರ್ಷಗಳಿಂದ ಶೂನ್ಯ ಫಲಿತಾಂಶ ಪಡೆದ 10 ಖಾಸಗಿ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಮಾನ್ಯತೆಯನ್ನು 2018-19ನೇ ಶೈಕ್ಷಣಿಕ ಸಾಲಿನಿಂದ ಅನ್ವಯಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹಿಂಪಡೆದಿದೆ. 
2015, 16 ಹಾಗೂ 2018ನೇ ಸಾಲಿ ಪರೀಕ್ಷೆಗಳಲ್ಲಿ ಈ 10 ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಶೂನ್ಯ ಫಲಿತಾಂಶ ಪಡೆದ ಹಿನ್ನಲೆಯಲ್ಲಿ ಅವುಗಳ ಮಂಜೂರಾತಿ ಆದೇಶವನ್ನು ರದ್ದು ಪಡಿಸಲು ಶಿಫಾರಸು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಶೂನ್ಯ ಫಲಿತಾಂಶ ಹಿನ್ನಲೆಯಲ್ಲಿ, ಫಲಿತಾಂಶಗಳತ್ತ ಗಮನಹರಿಸಿ ಸುಧಾರಿಸಿಕೊಳ್ಳುವಂತೆ ಸರ್ಕಾರ ಈ ಹಿಂದೆಯೇ ಕಾಲೇಜುಗಳಿಗೆ ನೋಟಿಸ್ ಮಾಡಿತ್ತು. ಆದರೂ, ಫಲಿತಾಂಶ ಶೂನ್ಯದಲ್ಲಿಯೇ ಮುಂದುವರೆದ ಹಿನ್ನಲೆಯಲ್ಲಿ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. 
ಮಾನ್ಯತೆ ರದ್ದುಕೊಂಡಿರುವ ಕಾಲೇಜುಗಳು ವಿವರ ಇಂತಿದೆ...
ಬಳ್ಳಾರಿಯ ಎಸ್.ಜೆ.ಬಸವೇಶ್ವರ ಪದವಿಪೂರ್ವ ಕಾಲೇಜು, ಬಾಗಲಕೋಟೆ ಕಾಂಚನೇಶ್ವರ ಪದವಿಪೂರ್ವ ಕಾಲೇಜು, ಬೆಳಗಾವಿಯ ರೇಖಾ ಪಿ. ಪಾಟೀಲ ಪದವಿಪೂರ್ವ ಕಾಲೇಜು, ದಾವಣಗೆಲೆಯ ಗೌಸಿಯಾ ಪದವಿಪೂರ್ವ ಕಾಲೇಜು, ಹಾವೇರಿಯ ಮಾರುತಿ ಸ್ವತಂತ್ರ ಪದವಿಪೂರ್ವ ಕಾಲೇಜು, ರಾಣಿ ಬೇಗಂ ಪದವಿಪೂರ್ವ ಕಾಲೇಜು, ಕಲಬುರಗಿಯ ಮೆಹಬೂಬ್ ಸುಬಾನಿ ಪದವಿಪೂರ್ವ ಕಾಲೇಜು, ಬ್ಯಾಪ್ಟಿಸ್ಟ್ ಪದವಿಪೂರ್ವ ಕಾಲೇಜು, ಹುಸೈನಿ ಪದವಿಪೂರ್ವ ಕಾಲೇಜು 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT